ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಐಟಿ ಅಧಿಕಾರಿ ಪುತ್ರ ಶರತ್​​ ಕೊಲೆ ಸೀಕ್ರೆಟ್​​ ಔಟಾಗಿದೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್​​ ಹತ್ಯೆಯ ಹಿಂದಿನ ಕರಾಳ ಸತ್ಯಗಳನ್ನ ಹೊರ ಹಾಕಿದ್ದಾರೆ.

ಬೆಂಗಳೂರು(ಸೆ.25): ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಐಟಿ ಅಧಿಕಾರಿ ಪುತ್ರ ಶರತ್​​ ಕೊಲೆ ಸೀಕ್ರೆಟ್​​ ಔಟಾಗಿದೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್​​ ಹತ್ಯೆಯ ಹಿಂದಿನ ಕರಾಳ ಸತ್ಯಗಳನ್ನ ಹೊರ ಹಾಕಿದ್ದಾರೆ.

ಶರತ್ ಹತ್ಯೆಗೆ ಹಂತಕರು ಒಂದು ತಿಂಗಳ ಹಿಂದೆಯೇ ಸ್ಕೆಚ್​ ಹಾಕಿದ್ರು. ಈ ಕಟು ಸತ್ಯವನ್ನ ಕೊಲೆಗಡುಕ ವಿಶಾಲ್​ ಹಾಗೂ ಆತನ ತಂಡದವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಶರತ್​​ ನನ್ನ ಕಿಡ್ನಾಪ್​​​ ಮಾಡಲು ವಿಶಾಲ್​​ ಅಂಡ್​​ ಟೀಂ ತಿಂಗಳ ಹಿಂದೆಯೇ ಬಾರ್​ನಲ್ಲಿ ಎರಡು ಬಾರಿ ಮೀಟಿಂಗ್​ ನಡೆಸಿದ್ದಾರೆ. ಶರತ್​​ ನನ್ನ ಕಿಡ್ನಾಪ್​​ ಮಾಡಿದ್ದ ದಿನವೇ ಕಿಡ್ನಾರ್ಪಾಸ್​ ಶರತ್​​ನ ತಂದೆ ಮತ್ತು ಅಕ್ಕನ ಮೊಬೈಲ್​​ ಗೆ ಮೆಸೇಜ್​​ ಕಳುಹಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು. ತಕ್ಷಣ ಶರತ್​ ತಂದೆ ನಿರಂಜನ್ ​​ಜ್ಞಾನಭಾರತಿ ಪೊಲೀಸ್​​ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

 ಕೇಸ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ತಂತೆ ಕಿಡ್ನಾಪ್​​ ಮಾಸ್ಟರ್​​ ಮೈಂಡ್​​ ವಿಶಾಲ್ ತನ್ನ ಟೀಂ ಗೆ ಶರತ್​ನನ್ನು ಕೊಲೆ ಮಾಡುವಂತೆ ತಿಳಿಸಿದ್ದಾನೆ. ಅದೇ ವೇಳೆಗೆ ಪೊಲೀಸರು ಕೂಡ ನಿರಂಜನ್​​ ಮೊಬೈಲ್​​ನಿಂದ 10 ಲಕ್ಷ ಕೋಡುತ್ತೇವೆ ಬಿಟ್ಟುಬಿಡಿ ಎಂದು ಮೇಸೆಜ್​ ಕಳಿಸಿದ್ದಾರೆ. ಆದ್ರೆ ಪೊಲೀಸರ ಮೇಸೆಜ್​​ ಹಂತಕರಿಗೆ ತಲುಪವಷ್ಟರಲ್ಲೇ ಶರತ್​​ ಕೊಲೆಯಾಗಿತ್ತು.