ರಾಜ್ಯ ಉಸ್ತುವಾರಿ ಮುರಳೀಧರ್ ಮಾಧ್ಯಮಗಳ ಮುಂದೆ ತೋರಿಸಿಕೊಳ್ಳುತ್ತಾರೆ ! ಮುರಳೀಧರ್ಗಿಂತ ಜೂನಿಯರ್ಗಳನ್ನು ತಂದ ಮೋದಿ ಮತ್ತು ಶಾ, ಮುರಳೀಧರ್ ಹೆಸರನ್ನು ಮಾತ್ರ ಪರಿಗಣಿಸಲಿಲ್ಲ !
ಕಳೆದ ವಾರ ಅಪರೂಪಕ್ಕೆ ಎಂಬಂತೆ ಕನ್ನಡದ ಪತ್ರಕರ್ತರನ್ನು ಚಹಾಕ್ಕೆ ಕರೆದಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಮಾತು ಮಾತಿಗೊಮ್ಮೆ ‘ಘಾಸ್ ಕಾಟನೆ ಬೈಠಾ ಹೂಂ ಕ್ಯಾ’ ಅನ್ನುತ್ತಿದ್ದರು.
ಅಂದರೆ, ಹುಲ್ಲು ಕೀಳಲು ಇಲ್ಲಿ ಕುಳಿತಿದ್ದೇನೆಯೇ ಎಂದು. ಪತ್ರಕರ್ತರ ಜೊತೆ ಹರಟೆ ಹೊಡೆಯುವಾಗಲೂ ಟೀವಿ ಕ್ಯಾಮೆರಾ ಎದುರಿನ ಚರ್ಚೆ ತರಹ ಜೋರಾಗಿ ಮಾತನಾಡುವ ಮುರಳೀಧರ್ ಜಾಣ ನಾನು ಮಾತ್ರ ಎನ್ನುವಂತೆ ತೋರಿಸಿಕೊಳ್ಳುತ್ತಾರೆ. ಆದರೆ, ರಾಜ್ಯಸಭೆಗೆ ಆಯ್ಕೆ ಮಾಡುವಾಗ ಮುರಳೀಧರ್ಗಿಂತ ಜೂನಿಯರ್ಗಳನ್ನು ತಂದ ಮೋದಿ ಮತ್ತು ಶಾ, ಮುರಳೀಧರ್ ಹೆಸರನ್ನು ಮಾತ್ರ ಪರಿಗಣಿಸಲಿಲ್ಲ.
[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]
