ಕೇಂದ್ರ ಸರ್ಕಾರ ಮಲ್ಯರವರನ್ನು ಕೋರ್ಟ್'ಗೆ ಹಾಜರುಪಡಿಸುವವರೆಗೆ ಜೈಲುಶಿಕ್ಷೆ ನಿರ್ಧರಿಸಲಾಗುವುದಿಲ್ಲ: ಸುಪ್ರೀಂ
ಲಂಡನ್’ನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯರವರನ್ನು ಕೇಂದ್ರ ಸರ್ಕಾರ ಕೋರ್ಟ್’ನಲ್ಲಿ ಹಾಜರುಪಡಿಸುವವರೆಗೆ ಅವರ ಜೈಲುಶಿಕ್ಷೆಯನ್ನು ನಿರ್ಧರಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.
ನವದೆಹಲಿ (ಜು.14): ಲಂಡನ್’ನಲ್ಲಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯರವರನ್ನು ಕೇಂದ್ರ ಸರ್ಕಾರ ಕೋರ್ಟ್’ನಲ್ಲಿ ಹಾಜರುಪಡಿಸುವವರೆಗೆ ಅವರ ಜೈಲುಶಿಕ್ಷೆಯನ್ನು ನಿರ್ಧರಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.
ಕೇಂದ್ರ ಸರ್ಕಾರವು ಉದ್ಯಮಿ ವಿಜಯ್ ಮಲ್ಯರವರನ್ನು ನ್ಯಾಯಾಂಗದಲ್ಲಿ ಹಾಜರುಪಡಿಸಲು ವಿಫಲವಾದ ಹಿನ್ನಲೆಯಲ್ಲಿ ಮಲ್ಯರವರ ಮೇಲಿರುವ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಂದೂಡಲಾಗಿದೆ. ಅವರನ್ನು ನ್ಯಾಯಾಂಗಕ್ಕೆ ಹಾಜರುಪಡಿಸಿದ ಬಳಿಕವೇ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.