ಸುಪ್ರೀಂ ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ತ್ರಿನವುಕರಸರ್
ನವದೆಹಲಿ (ಸೆ.24): ಸುಪ್ರೀಂಕೋರ್ಟ್ ಭಾರತದ ಸರ್ವೋಚ್ಚ ನ್ಯಾಯಾಲಯವಾಗಿದ್ದು ಇದು ನೀಡುವ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ತ್ರಿನವುಕರಸರ್ ಇಂದು ಹೇಳಿದ್ದಾರೆ.
ಉಭಯ ರಾಜ್ಯಗಳ ಕಾವೇರಿ ವಿಚಾರದ ಮೇಲುಸ್ತುವಾರಿ ನೋಡಿಕೊಳ್ಳಲು ಪ್ರಾಧಿಕಾರ ರಚನೆ ಮಾಡಲು ಸುಪ್ರೀಂ ಸೂಚಿಸಿದೆ. ಈ ಸೂಚನೆಯನ್ನು ಪಾಲಿಸಬೇಕು ಎಂದಿದ್ದಾರೆ.
ಪಕ್ಷ ಯಾವುದೇ ಇರಲಿ, ರಾಜ್ಯ ಯಾವುದೇ ಇರಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಜ್ಯಕ್ಕೆ ಯಾವುದೇ ಸಮಸ್ಯೆಯಿರಬಹುದು ಸುಪ್ರೀಂ ತೀರ್ಮಾನವನ್ನು ಪಾಲಿಸದೇ ಬೇರೆ ದಾರಿಯಿಲ್ಲ ಎಂದು ತ್ರಿನವುಕರಸರ್ ಹೇಳಿದ್ದಾರೆ.