ಅರ್ಜಿ ವಿಚಾರಣೆಗೆ ಪುರಸ್ಕರಿಸಿರುವ ಸುಪ್ರೀಕೋರ್ಟ್​​, ಸುಮಾರು ಹದಿನೈದು ನಿಮಿಷಗಳ ಕಾಲ ವಿಚಾರಣೆ ನಡೆಸಿತು. ಗಾಂಧಿ ಹತ್ಯೆ ಪುನರ್‌‌ ತನಿಖೆ ವಿಷಯದಲ್ಲಿ ನ್ಯಾಯಾಲಯದ ಮಾರ್ಗದರ್ಶಿಯಾಗಿ ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮರೇಂದ್ರ ಶರಣ್‌ ಅವರನ್ನು ನೇಮಿಸಿತು.

ನವದೆಹಲಿ(ಅ.06): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆ ಪ್ರಕರಣದ ತನಿಖೆಯನ್ನು ಪುನರಾರಂಭಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿದೆ.

Add Asianetnews Kannada as a Preferred SourcegooglePreferred

ವಿಚಾರಣೆಯಲ್ಲಿ ಕೆಲ ಶೋಧಕ ಪ್ರಶ್ನೆಗಳನ್ನು ಮುಂದಿರಿಸಿದೆ. ಗಾಂಧಿ ಅವರ ಹತ್ಯೆಯನ್ನು ಅನೇಕ ಕಾರಣಗಳ ಮೇಲೆ ತನಿಖೆ ನಡೆಸಬೇಕಿದ್ದು, ಪ್ರಕರಣ ಪುನರಾರಂಭಿಸುವ ಅಗತ್ಯವಿದೆ ಎಂದು ಮುಂಬೈ ಮೂಲದ ಸಂಶೋಧಕ ಹಾಗೂ ಅಭಿನವ್‌ ಭಾರತ್‌ ಟ್ರಸ್ಟಿ ಪಂಕಜ್‌ ಫ‌ಡ್ನಿ ಎಂಬುವವರು ಸುಪ್ರೀಂ ಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗೆ ಪುರಸ್ಕರಿಸಿರುವ ಸುಪ್ರೀಕೋರ್ಟ್​​, ಸುಮಾರು ಹದಿನೈದು ನಿಮಿಷಗಳ ಕಾಲ ವಿಚಾರಣೆ ನಡೆಸಿತು. ಗಾಂಧಿ ಹತ್ಯೆ ಪುನರ್‌‌ ತನಿಖೆ ವಿಷಯದಲ್ಲಿ ನ್ಯಾಯಾಲಯದ ಮಾರ್ಗದರ್ಶಿಯಾಗಿ ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮರೇಂದ್ರ ಶರಣ್‌ ಅವರನ್ನು ನೇಮಿಸಿತು.

ಅಲ್ಲದೇ ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 30ಕ್ಕೆ ನಿಗದಿ ಮಾಡಿತು. ಗಾಂಧಿ ಅವರನ್ನು 1948ರ ಜನವರಿ 30ರಂದು ದೆಹಲಿಯಲ್ಲಿ ನಾಥೂರಾಮ್​​ ಗೋಡ್ಸೆ ಗುಂಡಿಟ್ಟು ಹತ್ಯೆಗೈದಿದ್ದರು. ಮಹಾತ್ಮಾ ಗಾಂಧಿ ಹತ್ಯೆ ಇತಿಹಾಸದ ಹಿಂದೆ ದೊಡ್ಡ ಮುಸುಕಿದೆ. ಹತ್ಯೆಯಲ್ಲಿ 'ವಿದೇಶಿ ಕೈವಾಡ' ಎಂದು ಅರ್ಜಿದಾರ ಪಂಕಜ್‌ ಫ‌ಡ್ನಿ ಆರೋಪಿಸಿದ್ದಾರೆ.