ಸೋನಿಯಾ ಗಾಂಧಿ ಸಣ್ಣೆಗೌಡರ ಕುಟುಂಬದವರೇ? ಕೇಳಿ ಆರ್'ಟಿಐ ಅರ್ಜಿ ಸಲ್ಲಿಕೆ
ಇಲ್ಲೊಂದು ವಿಚಿತ್ರ ಆರ್'ಟಿ'ಐ ಅರ್ಜಿ ಸಲ್ಲಿಕೆಯಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಆರ್'ಟಿ'ಐ ಅರ್ಜಿ ಸ್ವೀಕರಿಸಿದ್ದಾರೆ.
ಮಂಡ್ಯ (ಜ.31): ಇಲ್ಲೊಂದು ವಿಚಿತ್ರ ಆರ್'ಟಿ'ಐ ಅರ್ಜಿ ಸಲ್ಲಿಕೆಯಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಆರ್'ಟಿ'ಐ ಅರ್ಜಿ ಸ್ವೀಕರಿಸಿದ್ದಾರೆ.
ಯೋಗಿ ಆದಿತ್ಯನಾಥ್, ಅಮಿತ್ ಷಾ ಕನ್ನಡಿಗರಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಸೋನಿಯಾ ಗಾಂಧಿ ಸಣ್ಣೆಗೌಡರ ಕುಟುಂಬದವರೇ ? ರಾಹುಲ್ ಗಾಂಧಿ ರಾಯಶೆಟ್ಟಿಪುರದ ರಾಜಣ್ಣ ಮನೆತನದವರೇ ? ಕೆ ಸಿ ವೇಣುಗೋಪಾಲ್'ರವರು ಬನ್ನೂರು ಪಟೇಲರ ನೆಂಟರೇ ? ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಪ್ರಕಾಶ್ ರೈ, ಕನ್ನಯ್ಯರಿಗೆ ವಹಿಸಲಾಗಿದೆಯೇ ? ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ಮಾಹಿತಿ ಹಕ್ಕು ಹಕ್ಕು ಅರ್ಜಿ ಸಲ್ಲಿಕೆಯಾಗಿದೆ.