Asianet Suvarna News Asianet Suvarna News

ರಿಪಬ್ಲಿಕ್'ಗೆ ಚಾಲನೆ: ಮೊದಲ ದಿನವೇ ಲಾಲು-ಶಹಾಬುದ್ದೀನ್ ಎಕ್ಸ್'ಪೋಸ್

ಅರ್ನಬ್​ ಗೋಸ್ವಾಮಿ ನೇತೃತ್ವದಲ್ಲಿ ಆರಂಭವಾಗಿರುವ ರಿಪಬ್ಲಿಕ್​​​​ ನ್ಯೂಸ್​ ಚಾನೆಲ್​, ಶಹಾಬುದ್ದೀನ್ ಜೈಲಿನಿಂದಲೇ ಲಾಲು ಪ್ರಸಾದ್​ ಯಾದವ್​ಗೆ ಕರೆ ಮಾಡಿದ್ದನ್ನು ಬಹಿರಂಗಪಡಿಸಿದೆ. ಶಹಾಬುದ್ದೀನ್ ಆರ್'ಜೆಡಿ  ಮುಖ್ಯಸ್ಥ  ಹಾಗೂ ಮಾಜಿ ಸಿಎಂ ಲಾಲು ಪ್ರಸಾದ್​ ಯಾದವ್'​​ಗೆ ಕರೆ ಮಾಡಿ ಪೊಲೀಸರ ವಿರುದ್ಧ  ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾನೆ.

Republic TV exposes Lalu Shahabuddin Nexus

ನವದೆಹಲಿ (ಮೇ.06): ಏಷ್ಯಾನೆಟ್​ ಗ್ರೂಪ್'​ನಿಂದ ಮತ್ತೊಂದು ಮಾಧ್ಯಮ ಸಂಸ್ಥೆ ಆರಂಭವಾಗಿದ್ದು ಮೊದಲ ದಿನವೇ ಬಿಹಾರ ಮಾಫಿಯಾ ಡಾನ್​ ಶಹಾಬುದ್ದೀನ್ -ಲಾಲು ಪ್ರಸಾದ್ ಯಾದವ್'ರನ್ನು ಎಕ್ಸ್​'ಪೋಸ್ ಮಾಡಲಾಗಿದೆ.

ಅರ್ನಬ್​ ಗೋಸ್ವಾಮಿ ನೇತೃತ್ವದಲ್ಲಿ ಆರಂಭವಾಗಿರುವ ರಿಪಬ್ಲಿಕ್​​​​ ನ್ಯೂಸ್​ ಚಾನೆಲ್​, ಶಹಾಬುದ್ದೀನ್ ಜೈಲಿನಿಂದಲೇ ಲಾಲು ಪ್ರಸಾದ್​ ಯಾದವ್​ಗೆ ಕರೆ ಮಾಡಿದ್ದನ್ನು ಬಹಿರಂಗಪಡಿಸಿದೆ. ಶಹಾಬುದ್ದೀನ್ ಆರ್'ಜೆಡಿ  ಮುಖ್ಯಸ್ಥ  ಹಾಗೂ ಮಾಜಿ ಸಿಎಂ ಲಾಲು ಪ್ರಸಾದ್​ ಯಾದವ್'​​ಗೆ ಕರೆ ಮಾಡಿ ಪೊಲೀಸರ ವಿರುದ್ಧ  ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾನೆ.

2016ರ ಏಪ್ರಿಲ್​ 15ರ ಲಾಲು-ಶಹಾಬುದ್ದೀನ್​ ನಡುವಿನ ಫೋನ್​​​ ಮಾತುಕತೆ ಬಹಿರಂಗಪಡಿಸಿರುವ ರಿಪಬ್ಲಿಕ್, ಫೈರಿಂಗ್​ ಮಾಡಿದ್ದು ಯಾಕೆ, ನಿಮ್ಮ SP ಜೊತೆ ಮಾತಾಡಿ, ಇಲ್ಲದಿದ್ದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತೆ, ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾನೆ.

ನಾನು ಎಸ್'​ಪಿ ಜೊತೆ ಮಾತಾಡ್ತೀನಿ ಎಂದು  ಆ ಸಂದರ್ಭದಲ್ಲಿ ಲಾಲು ಯಾದವ್ ಭರವಸೆ ಕೊಟ್ಟಿದ್ದರು. ​

ಸುದ್ದಿ ಬಹಿರಂಗ ಮಾಡದಂತೆ ಅರ್ನಬ್​ ಗೋಸ್ವಾಮಿ ಬೆನ್ನು ಬಿದ್ದಿದ್ದ ಲಾಲು, ಗೋಸ್ವಾಮಿಗೆ 36 ಬಾರಿ ದೂರವಾಣಿ ಕರೆ ಮಾಡಿದ್ದಾರೆನ್ನಲಾಗಿದೆ.

Follow Us:
Download App:
  • android
  • ios