Asianet Suvarna News Asianet Suvarna News

ಬೀದರ್: ಬೇಡಿದ್ದನ್ನು ಕೊಡುವ ವಿಸ್ಮಯಕಾರಿ ರೇಜಿಂತಲ್ ಸಿದ್ಧಿ ವಿನಾಯಕ

ರೇಜಿಂತಲ್ ಗಣೇಶ ದೇವಸ್ಥಾನದಲ್ಲಿರುವುದು ಉದ್ಭವ ಮೂರ್ತಿಯಾಗಿದೆ. 215 ವರ್ಷಗಳಿಂದ ಇದು ನಿರಂತರವಾಗಿ ಹಿಗ್ಗುತ್ತಿರುವುದು ವಿಸ್ಮಯ ಮೂಡಿಸಿದೆ. ಅಲ್ಲದೇ, ದಕ್ಷಿಣಾಭಿಮುಖಿಯಾಗಿರುವ ವಿನಾಯಕನ ಮೂರ್ತಿ ಇರುವುದು ದೇಶದಲ್ಲಿ ಇದೊಂದೇ.

rejintal vinayaka temple in bidar medak border

ಬೀದರ್(ಆ. 25): ರಾಜ್ಯದ ಎಲ್ಲೆಡೆಯಂತೆ ಗಡಿ ಜಿಲ್ಲೆಯ ಬೀದರ್'ನಲ್ಲೂ ಇಂದು ಗಣೇಶನ ಹಬ್ಬ ಬಹಳ ಭಕ್ತಿ ಸಡಗರದಿಂದ ನಡೆಯುತ್ತಿದೆ. ಆದರೆ, ಬೀದರ್ ಮತ್ತು ಆಂಧ್ರದ ಮೇದಕ್ ಜಿಲ್ಲೆಯ ಗಡಿಯಲ್ಲಿರುವ ರೇಜಿಂತಲ್ ಎಂಬ ಗ್ರಾಮದಲ್ಲಿರುವ ಸಿದ್ಧಿ ವಿನಾಯಕನ ದರ್ಶನಕ್ಕೆ ದೊಡ್ಡ ಜನಸಾಗರವೇ ಹರಿದುಬರುತ್ತಿದೆ. ಇಲ್ಲಿಯ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಪ್ರತೀ ವರ್ಷವೂ ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.

ರೇಜಿಂತಲ್ ಗಣೇಶ ದೇವಸ್ಥಾನದಲ್ಲಿರುವುದು ಉದ್ಭವ ಮೂರ್ತಿಯಾಗಿದೆ. 215 ವರ್ಷಗಳಿಂದ ಇದು ನಿರಂತರವಾಗಿ ಹಿಗ್ಗುತ್ತಿರುವುದು ವಿಸ್ಮಯ ಮೂಡಿಸಿದೆ. ಅಲ್ಲದೇ, ದಕ್ಷಿಣಾಭಿಮುಖಿಯಾಗಿರುವ ವಿನಾಯಕನ ಮೂರ್ತಿ ಇರುವುದು ದೇಶದಲ್ಲಿ ಇದೊಂದೇ.

ಗಣೇಶ ಚತುರ್ಥಿಯಂದು ಈ ರಜಿಂತಲ್ ಸಿದ್ದಿ ವಿನಾಯಕನಿಗೆ ಮೊದಲು ಪೂಜೆ ಮಾಡಿದರೆ ತಾವು ಅಂದುಕೊಂಡಿರುವ ಕಾರ್ಯ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯು ಭಕ್ತರಲ್ಲಿದೆ. ಹೀಗಾಗಿ, ಇಲ್ಲಿ ಗಣೇಶ ಹಬ್ಬದಂದು ದೊಡ್ಡ ಜನಸಾಗರವೇ ಹರಿದುಬರುತ್ತದೆ.

ವರದಿ: ಲಿಂಗೇಶ್, ಸುವರ್ಣನ್ಯೂಸ್, ಬೀದರ್

Follow Us:
Download App:
  • android
  • ios