Asianet Suvarna News Asianet Suvarna News

ಮಂಡ್ಯ ಜೆಡಿಎಸ್'ನಲ್ಲಿ ಬಂಡಾಯದ ಬಿಸಿ : ಪ್ರಮುಖ ಮುಖಂಡ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ?

ಜೆಡಿಎಸ್ ಟಿಕೆಟ್ ಕೈತಪ್ಪಿದರೆ ಬಿಜೆಪಿ‌ ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Rebel Activities at Mandya JDS

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್'ಗೆ ಬಂಡಾಯದ ಬಿಸಿ ತಟ್ಟಿದೆ. ಮಂಡ್ಯ ಕ್ಷೇತ್ರದ ಜೆಡಿಎಸ್ ಪ್ರಭಲಾಂಕ್ಷಿ  ಚಂದಗಾಲು ಶಿವಣ್ಣ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿರುವುದರಿಂದ ತಮ್ಮ ಹಿತೈಷಿಗಳ ಸಭೆ ನಡೆಸಿದ್ದಾರೆ.

ಮಂಡ್ಯ ನಗರದ ಎಸಿ ಮಾಧೇಗೌಡ ಸಮುದಾಯ ಭವನದಲ್ಲಿ ಹಿತೈಷಿಗಳ ಸಭೆ ಹೆಸರಿನಲ್ಲಿ ಶಿವಣ್ಣ ಶಕ್ತಿ‌ ಪ್ರದರ್ಶನ ನಡೆಸಿದ್ದಾರೆ. ಸಭೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಜೆಡಿಎಸ್ ಟಿಕೆಟ್ ಕೈತಪ್ಪಿದರೆ ಬಿಜೆಪಿ‌ ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶಿವಣ್ಣ ಜೊತೆ ಈಗಾಗಲೆ‌ ರಾಜ್ಯ ಬಿಜೆಪಿ ನಾಯಕರು ಶಿವಣ್ಣ ಜೊತೆ ಈಗಾಗಲೆ‌ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ.

Follow Us:
Download App:
  • android
  • ios