CD ಲೇಡಿಯ ಮತ್ತೊಂದು ವಿಡಿಯೋ ರಿಲೀಸ್, ಇಳಿಯಿತು ಪೆಟ್ರೋಲ್ ಪ್ರೈಸ್; ಮಾ.25ರ ಟಾಪ್ 10 ಸುದ್ದಿ!
ರಾಜಕೀಯ ದುರಾಸೆಗೆ ತನ್ನ ಮಗನ ಮದುವೆ ಮಾಡಿದ ಘಟನೆ ನಡೆದಿದೆ. ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಮಾ. 27 ರಿಂದ ಏ. 4ರವರೆಗೆ ಏಳು ದಿನ ಬ್ಯಾಂಕ್ ವಹಿವಾಟು ಇರುವುದಿಲ್ಲ. ನಯನ ಯಾರಾ ಎಂಗೇಜ್ಮೆಂಟ್, ಒಂದು ವರ್ಷದ ಬಳಿಕ ಪೆಟ್ರೋಲ್ ಬೆಲೆ ಇಳಿಕೆ ಸೇರಿದಂತೆ ಮಾರ್ಚ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ರಾಜಕೀಯ ನಾಯಕನ 'ದುರಾಸೆ': ಅನ್ಯ ಜಾತಿ ಯುವತಿಯೊಂದಿಗೆ ಮಗನ ವಿವಾಹ!...
ಉತ್ತರ ಪ್ರದೇಶದ ನಾರಾಯಣಪುರ ಹಳ್ಳಿಯಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ ಎಂಬಂತಿದೆ. ಹೌದು ಇಲ್ಲಿನ ಸಾಮಾಆಣ್ಯ ವರ್ಗದ ನಾಯಕನೊಬ್ಬ ತನ್ನ ಮಗನ ವಿವಾಹ ಹಿಂದುಳಿದ ವರ್ಗದ ಯುವತಿಯೊಂದಿಗೆ ನೆರವೇರಿಸಿದ್ದಾರೆ. ಇದಾದ ಬಳಿಕ ತನ್ನ ಸೊಸೆಯನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಕೇಸ್ : ಈಗ ಲೇಡಿಯ ಮತ್ತೊಂದು ವಿಡಿಯೋ ರಿಲೀಸ್...
ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಸೀಡಿ ಲೇಡಿ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದು ಹಲವು ವಿಚಾರಗಳನ್ನು ಆಕೆ ಹೇಳಿದ್ದಾರೆ. ಆಕೆ ಹೇಳಿರೋ ಆ ಮ್ಯಾಟರ್ಗಳೇನು..?
ಕರ್ನಾಟಕ ಸವಾರನ ನಿಲ್ಲಿಸಿದ ತಮಿಳುನಾಡು ಪೊಲೀಸ್; ಕೇಳಿದ್ದು DL, ವಿಮೆ ಅಲ್ಲ, ಹೃದಯಸ್ಪರ್ಶಿ ಘಟನೆ!...
ಹೆದ್ದಾರಿಗಳಲ್ಲಿ ವಾಹನ ನಿಲ್ಲಿಸಿ ಪೊಲೀಸರು ತಪಾಸಣೆ ನಡೆಸುವುದು ಸಾಮಾನ್ಯ. ಹೀಗಾಗಿ ಕರ್ನಾಟಕದ ಬೈಕ್ ಸವಾರ ಪಾಂಡಿಚೇರಿ ತೆರಳುತ್ತಿದ್ದ ವೇಳೆ ತಮಿಳುನಾಡು ಪೊಲೀಸ್ ತಡೆದು ನಿಲ್ಲಿಸಿದ್ದಾರೆ. ಡ್ರೈವಿಂಗ್ ಲೆಸೆನ್ಸ್, ವಿಮೆ ಸೇರಿದಂತೆ ಯಾವುದೇ ದಾಖಲೆ ಕೇಳಿಲ್ಲ. ಬದಲಾಗಿ ಪೊಲೀಸ್ ಮಾಡಿದ ಮನವಿ ಎಲ್ಲರ ಹೃದಯ ತಟ್ಟಿದೆ.
ಗ್ರಾಹಕರೇ ಗಮನಿಸಿ, ಮಾ. 27 ರಿಂದ ಏ. 4ರವರೆಗೆ ಏಳು ದಿನ ಬ್ಯಾಂಕ್ ಬಂದ್!...
ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್ಲಾ ಬ್ಯಾಂಕ್ಗಳು ಮಾರ್ಚ್ 7 ರಿಂದ ಏಪ್ರಿಲ್ 4ರ ನಡುವೆ ಬರೋಬ್ಬರಿ ಏಳು ದಿನ ಮುಚ್ಚಿರಲಿವೆ. ಹೀಗಾಗಿ ಬ್ಯಾಂಕ್ ಸಂಬಂಧಿ ಏನೇ ಕೆಲಸವಿದ್ದರೂ ಈ ದಿನಾಂಕವನ್ನು ನೋಟ್ ಮಾಡಿಟ್ಟುಕೊಳ್ಳಿ. ಮಾರ್ಚ್ 27 ರಿಂದ ಮಾರ್ಚ್ 29ರವರೆಗೆ ಬ್ಯಾಂಕ್ ಸತತ ಮೂರು ದಿನ ಬಂದ್ ಇರಲಿವೆ.
ಕೃನಾಲ್ ಪಾಂಡ್ಯ ಬಗ್ಗೆ ನಿಮಗೆ ಗೊತ್ತಿರದ ಟಾಪ್ 10 ಕುತೂಹಲಕಾರಿ ಸಂಗತಿಗಳಿವು..!...
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಮಾರ್ಚ್ 24, 2021ರಂದು ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೃನಾಲ್ ಹುಟ್ಟುಹಬ್ಬಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.
ಬಾಕ್ಸಿಂಗ್ ಗ್ಲೌಸ್ ಹಾಕ್ಕೊಂಡೇ ಕೀರ್ತಿ ಮುಖಕ್ಕೆ ಪಂಚ್ ಕೊಟ್ಟ ನಿತಿನ್...
ಕೀರ್ತಿ ಸುರೇಶ್ ಮತ್ತು ನಿತಿನ್ ತಮ್ಮ ಮುಂಬರುವ ಚಿತ್ರ ರಂಗ್ ದೇ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ನಿನ್ನೆ, ಕೀರ್ತಿ ಇನ್ಸ್ಟಾಗ್ರಾಮ್ನಲ್ಲಿ ಬಿಟಿಎಸ್ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಆಕೆಗೆ ಆಕಸ್ಮಿಕವಾಗಿ ನಿತಿನ್ ಹೊಡೆಯುವುದನ್ನು ಕಾಣಬಹುದು.
ಬೆಂಗಳೂರು : ಕೋವಿಡ್ 19- ನಿಮಗೆ ಬೇಕಾದ ಮಾಹಿತಿ, ಸಹಾಯಕ್ಕೆ ಇಲ್ಲಿ ಸಂಪರ್ಕಿಸಿ...
ರಾಜ್ಯದಲ್ಲಿ ಮತ್ತೆ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಆರಂಭಿಸಿದೆ. ಬೆಂಗಳೂರಿನಲ್ಲಿ ದಿನದಿನಕ್ಕೂ ಕೊರೋನಾ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣದ ವಿಧಾನಸಭಾ ಕ್ಷೇತ್ರಗಳಲ್ಲಿ ಕೋವಿಡ್ ರಕ್ಷಾ ವ್ಯವಸ್ಥೆ ಆರಂಭಿಸಲಾಗುತ್ತಿದೆ.
1 ವರ್ಷ ನಂತರ ಮೊದಲ ಸಲ ಪೆಟ್ರೋಲ್ ದರ ಇಳಿಕೆ!...
ತೈಲ ದರ ಏರಿಕೆ ವಿರುದ್ಧ ರೋಸಿ ಹೋಗಿದ್ದ ಜನರಿಗೆ ಸಮಾಧಾನದ ಸುದ್ದಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಲೀಟರ್ ಪೆಟ್ರೋಲ್ ದರವನ್ನು 18 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 17 ಪೈಸೆಯಷ್ಟುತೈಲ ಕಂಪನಿಗಳು ಕಡಿತಗೊಳಿಸಿವೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುತ್ತಿರುವುದು ಕಳೆದ ಒಂದು ವರ್ಷದ ಅವಧಿಯಲ್ಲಿ ಇದೇ ಮೊದಲು.
100 ಕೋಟಿ ಹಫ್ತಾ ಆರೋಪ ಗಂಭೀರ: ಸುಪ್ರೀಂ...
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಮಾಸಿಕ 100 ಕೋಟಿ ಹಫ್ತಾ ವಸೂಲಿ ಮಾಡಲು ತಮಗೆ ಸೂಚಿಸಿದ್ದರು ಎಂಬ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ಬೀರ್ಸಿಂಗ್ ಅವರ ಆರೋಪ ಗಂಭೀರವಾದುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನಯನತಾರಾ ಎಂಗೇಜ್ಮೆಂಟ್ ಆಯ್ತಾ..? ಫೋಟೋ ವೈರಲ್...
ನಯನತಾರಾ ಅವರ ವೈಯಕ್ತಿಕ ಜೀವನವು ಯಾವಾಗಲೂ ಫ್ಯಾನ್ಸ್ಗೆ ಇಂಟ್ರೆಸ್ಟಿಂಗ್ ವಿಚಾರ. ನಯನ್ ಮತ್ತು ಆಕೆಯ ಗೆಳೆಯ-ನಿರ್ದೇಶಕ ವಿಘ್ನೇಶ್ ಶಿವನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ.