ಪಾಕಿಸ್ತಾನ ಉಗ್ರರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಗಡಿ ನಿಯಂತ್ರಣ ರೇಖೆ ಹಾಗೂ ಪ್ರಮುಖ ವೈಮಾನಿಕ ವಾಯುನೆಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಇದೀಗ ಕರ್ನಾಟಕದ ಕಾರವಾರದಲ್ಲಿರುವ ನೌಕಾನೆಲೆಯಲ್ಲೂ ಹೈ-ಅಲರ್ಟ್ ಘೋಷಿಸಲಾಗಿದೆ.
ಕಾರವಾರ(ಫೆ.26): ಪಾಕಿಸ್ತಾನ ಉಗ್ರ ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿದೆ. 10 ಉಗ್ರರ ಕ್ಯಾಂಪ್ಗಳನ್ನ ಧ್ವಂಸಗೊಳಿಸಿದ ಬೆನ್ನಲ್ಲೇ, ಭಾರತೀಯ ಗಡಿ ನಿಯಂತ್ರಣ ರೇಖೆಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಇದೀಗ ಕಾರವಾರದಲ್ಲಿರುವ INS ಕದಂಬ ನೌಕಾನೆಲೆಯಲ್ಲಿ ಕೂಡ ಹೈ-ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಪುಲ್ವಾಮ ದಾಳಿಯ JEM ಉಗ್ರರ ಕ್ಯಾಂಪ್ ಧ್ವಂಸ - ಯುದ್ಧ ಆರಂಭ!
ಇಂದು ಬೆಳಗಿನ ಜಾವ(ಫೆ.26) ಭಾರತೀಯ ವಾಯುಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್, ಮುಜಾಫರಾಬಾದ್, ಚಾಕೋಟಿಗೆ ನುಗ್ಗಿದ ಭಾರತೀಯ ವಾಯುಸೇನೆ ಉಗ್ರರ ಕ್ಯಾಂಪ್ಗಳನ್ನ ನೆಲೆಸಮಗೊಳಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ.
ಇದನ್ನೂ ಓದಿ: ಭಾರತ ದಾಳಿ ಮಾಡ್ತಿದೆ ಎಂದು ಬಾಯಿ ಬಡ್ಕೊಂಡ ಪಾಕ್!
ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್- ಎ -ಮೊಹಮ್ಮದ್ ಎಂಬ ಉಗ್ರ ಸಂಘಟನೆಯ ಆದಿಲ್ ದಾರ್ , ಭಾರತೀಯ ಸೇನೆಯ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ. ಈ ದಾಳಿಯಿಂದ 44 CRPF ಯೋಧರು ಹುತಾತ್ಮರಾಗಿದ್ದರು. ಸದ್ಯ ಅದರ ಪ್ರತೀಕಾರ ಎಂಬಂತೆ ಭಾರತ ಈಗ ಉಗ್ರನೆಲೆ ಮೇಲೆ ದಾಳಿ ನಡೆಸಿದೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 26, 2019, 10:39 AM IST