ಹಾಸನ ನಗರದೊಳಗೆ ಹಾಸನ-ಮಂಗಳೂರು ರೈಲ್ವೇ ಲೈನ್‌ನಲ್ಲಿ ಲೆವೆಲ್ ಕ್ರಾಸಿಂಗ್ 3ರಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು. ಹಾಸನದಲ್ಲಿರುವ ಹಳೆಯ ರೈಲ್ವೇ ನಿಲ್ದಾಣವು ನಗರದಿಂದ ದೂರದಲ್ಲಿದ್ದು, ಹೊಸ ರೈಲ್ವೇ ನಿಲ್ದಾಣಕ್ಕೆ ಬಸ್‌ಸ್ಟ್ಯಾಂಡ್ ಬಳಿಯೇ ಜಾಗ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿ ರೈಲ್ವೇ ನಿಲ್ದಾಣ ಕಾಮಗಾರಿ ಪ್ರಾರಂಭಿಸಬೇಕು ಎಂದು ದೇವೇಗೌಡ ರೈಲ್ವೇ ಸಚಿವರಲ್ಲಿ ಮನವಿ ಮಾಡಿದ್ದಾರೆ.

ನವದೆಹಲಿ(ಡಿ.29): ಹಾಸನ ಜಿಲ್ಲೆಯ ರೈಲ್ವೇ ಸಂಬಂಧಿ ವಿವಿಧ ಬೇಡಿಕೆಗಳ ಬಗ್ಗೆ ಮಾಜಿ ಪ್ರಧಾನಿ, ಹಾಸನದ ಸಂಸದ ಎಚ್.ಡಿ.ದೇವೇಗೌಡ ಅವರು ರೈಲ್ವೇ ಸಚಿವ ಪಿಯೂಷ್ ಗೊಯೆಲ್ ಅವರ ಜೊತೆ ಗುರುವಾರ ಚರ್ಚೆ ನಡೆಸಿದರು.

Add Asianetnews Kannada as a Preferred SourcegooglePreferred

ದೆಹಲಿಯ ತಮ್ಮ ಸರ್ಕಾರಿ ನಿವಾಸ 5, ಸಫ್ದರ್ ಜಂಗ್ ಲೇನ್‌ಗೆ ಆಗಮಿಸಿದ ರೈಲ್ವೇ ಸಚಿವರಲ್ಲಿ ದೇವೇಗೌಡ ಅವರು ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ ಅವರು ಕೂಡ ಉಪಸ್ಥಿತರಿದ್ದರು. ಹಾಸನ ನಗರದೊಳಗೆ ಹಾಸನ-ಮಂಗಳೂರು ರೈಲ್ವೇ ಲೈನ್‌ನಲ್ಲಿ ಲೆವೆಲ್ ಕ್ರಾಸಿಂಗ್ 3ರಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು. ಹಾಸನದಲ್ಲಿರುವ ಹಳೆಯ ರೈಲ್ವೇ ನಿಲ್ದಾಣವು ನಗರದಿಂದ ದೂರದಲ್ಲಿದ್ದು, ಹೊಸ ರೈಲ್ವೇ ನಿಲ್ದಾಣಕ್ಕೆ ಬಸ್‌ಸ್ಟ್ಯಾಂಡ್ ಬಳಿಯೇ ಜಾಗ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿ ರೈಲ್ವೇ ನಿಲ್ದಾಣ ಕಾಮಗಾರಿ ಪ್ರಾರಂಭಿಸಬೇಕು ಎಂದು ದೇವೇಗೌಡ ರೈಲ್ವೇ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು- ಹಾಸನ- ಮಂಗಳೂರು ವಿಭಾಗದಲ್ಲಿ ರೈಲ್ವೇ ಓಡಾಟವನ್ನು ಹೆಚ್ಚಿಸಬೇಕು. 2018ರ ಫೆಬ್ರುವರಿಯಲ್ಲಿ ಶ್ರವಣ ಬೆಳಗೊಳದಲ್ಲಿ ಮಹಾಮಸ್ತಾಕಾಭಿಷೇಕ ನಡೆಯಲಿದ್ದು, ಈ ಸಂದರ್ಭದಲ್ಲಿ ಶ್ರವಣಬೆಳಗೊಳದ ಮೂಲಕ ಹಾಸನ

ಮತ್ತು ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲು ಓಡಿಸಬೇಕು. ಮುಂಜಾನೆ 5ರಿಂದ ರಾತ್ರಿ 11ರವರೆಗೆ ಗಂಟೆಗೊಂದರಂತೆ ಬೆಂಗಳೂರು- ಹಾಸನ, ಹಾಸನ-ಬೆಂಗಳೂರು ಮಧ್ಯೆ ವಿಶೇಷ ರೈಲು ಓಡಲು ವ್ಯವಸ್ಥೆ ಮಾಡಿ ಎಂದು ಮಾಜಿ ಪ್ರಧಾನಿಗಳು ಗೊಯೆಲ್ ಅವರಲ್ಲಿ ಕೋರಿದ್ದಾರೆ.ಬಂದರು ನಗರಿಗಳಾದ ಚೆನ್ನೈ-ಮಂಗಳೂರನ್ನು ಸಂಪರ್ಕಿಸುವ ರೈಲುಗಳನ್ನು ಹಾಸನ, ಬೆಂಗಳೂರು ಮೂಲಕ ಓಡಿಸಿ, ಚಿಕ್ಕಮಗಳೂರು ಮತ್ತು ಸಕಲೇಶಪುರದ ರೈಲ್ವೇ ಲಿಂಕ್ ಯೋಜನೆಗಳನ್ನು ಬೇಲೂರು ಮತ್ತು ಹಾಸನದ ಮೂಲಕ ಜಾರಿಗೊಳಿಸಿ. ಏಕೆಂದರೆ ಪ್ರಸ್ತಾವಿತ ಕಡೂರು- ಚಿಕ್ಕಮಗಳೂರು- ಸಕಲೇಶಪುರ ಯೋಜನೆಗೆ ಪರಿಸರ ಸಂಬಂಧಿ ತೊಡಕುಗಳಿವೆ ಎಂದು ರೈಲ್ವೇ ಸಚಿವರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ದೇವೇಗೌಡರು ಮಾಡಿರುವುದಾಗಿ ಮೂಲಗಳು ತಿಳಿಸಿವೆ.