ಶೋಭಾ ಕರಂದ್ಲಾಜೆ-ಬಿಎಸ್’ವೈ ಕೇರಳದಲ್ಲಿ ಮದುವೆಯಾಗಿದ್ದಾರಂತೆ!
ಕೇರಳದ ಚೋಟಾಣಿಕೆರೆ ಗ್ರಾಮದ ಭಗವತಿ ದೇವಸ್ಥಾನದಲ್ಲಿ ಯಡಿಯೂರಪ್ಪ ಶೋಭಾ ಕರಂದ್ಲಾಜೆ ಮದುವೆಯಾಗಿದ್ದಾರೆ. ಈಗಾಗಲೇ ನನ್ನ ಮೇಲೆ ಹಲವು ಬಾರಿ ಹಲ್ಲೆಯಾಗಿದೆ. ಕಿಡ್ನ್ಯಾಪ್ ಮಾಡಿಸಿದ್ರು ನನಗೆ ಜೀವ ಬೆದರಿಕೆಯಿದೆ. ಈ ಬಗ್ಗೆ ಎಲ್ಲರಿಗೂ ಕಂಪ್ಲೇಂಟ್ ಕೊಟ್ಟಿದ್ದೇನೆ. ಆದರೆ ಶೋಭಾ ಕರಂದ್ಲಾಜೆ ವಿರುದ್ದ ಯಾರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತುಮಕೂರಿನಲ್ಲಿ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ.
ತುಮಕೂರು (ಫೆ.21): ಕೇರಳದ ಚೋಟಾಣಿಕೆರೆ ಗ್ರಾಮದ ಭಗವತಿ ದೇವಸ್ಥಾನದಲ್ಲಿ ಯಡಿಯೂರಪ್ಪ ಶೋಭಾ ಕರಂದ್ಲಾಜೆ ಮದುವೆಯಾಗಿದ್ದಾರೆ. ಈಗಾಗಲೇ ನನ್ನ ಮೇಲೆ ಹಲವು ಬಾರಿ ಹಲ್ಲೆಯಾಗಿದೆ. ಕಿಡ್ನ್ಯಾಪ್ ಮಾಡಿಸಿದ್ರು ನನಗೆ ಜೀವ ಬೆದರಿಕೆಯಿದೆ. ಈ ಬಗ್ಗೆ ಎಲ್ಲರಿಗೂ ಕಂಪ್ಲೇಂಟ್ ಕೊಟ್ಟಿದ್ದೇನೆ. ಆದರೆ ಶೋಭಾ ಕರಂದ್ಲಾಜೆ ವಿರುದ್ದ ಯಾರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತುಮಕೂರಿನಲ್ಲಿ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ.
ಶೋಭಾ ಕರಂದ್ಲಾಜೆಯನ್ನು ಬಂಧಿಸಲಿ. ಯಡಿಯೂರಪ್ಪ ಬಗ್ಗೆ ನನಗೆ ಅಪಾರವಾದ ಅಭಿಮಾನವಿದೆ. ಶೊಭಾಕರಂದ್ಲಾಜೆ ಮೋಸ ಮಾಡಿದ್ದಾರೆ. ಯಡಿಯೂರಪ್ಪ ಮೋಸ ಮಾಡಿಲ್ಲ. ನನ್ನ ಶತ್ರು ಶೋಭಕರಂದ್ಲಾಜೆ ನೇಪಾಳದಲ್ಲಿ ಹಂದಿ ಪ್ರಯೋಗ ಮಾಡಿ ವಾಮಚಾರ ಮಾಡಿಸಿದ್ದಾರೆ. ಚಾಮುಂಡೇಶ್ವರಿ ಆಶೀರ್ವಾದದಿಂದ ಬದುಕಿದ್ದೇನೆ. ನಾನು ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ.