ಸಲ್ಮಾನ್ ಖಾನ್ ಕೂಡಲೇ ಶರಣಾಗುವಂತೆ ಆದೇಶ ನೀಡಲು ಸುಪ್ರೀಂಗೆ ರಾಜಸ್ಥಾನ್ ಸರ್ಕಾರ ಮನವಿ
ಅಳಿವಿನಂಚಿನಲ್ಲಿರುವ ಗೆಜೆಲ್ಲೆ ಸಂತತಿಗಳನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ರನ್ನು ಖುಲಾಸೆ ಮಾಡಲಾಗುವುದಿಲ್ಲ.ಅವರು ಕೂಡಲೇ ಶರಣಾಗುವಂತೆ ಆದೇಶ ನೀಡಿ ಎಂದು ರಾಜಸ್ಥಾನ್ ಸರ್ಕಾರ ಸುಪ್ರೀಂನಲ್ಲಿ ವಾದಿಸಿದೆ.
ಜೈಪುರ (ಅ.19): ಅಳಿವಿನಂಚಿನಲ್ಲಿರುವ ಗೆಜೆಲ್ಲೆ ಸಂತತಿಗಳನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ರನ್ನು ಖುಲಾಸೆ ಮಾಡಲಾಗುವುದಿಲ್ಲ.ಅವರು ಕೂಡಲೇ ಶರಣಾಗುವಂತೆ ಆದೇಶ ನೀಡಿ ಎಂದು ರಾಜಸ್ಥಾನ್ ಸರ್ಕಾರ ಸುಪ್ರೀಂನಲ್ಲಿ ವಾದಿಸಿದೆ.
ಸಲ್ಮಾನ್ ಖಾನ್ ಮೇಲೆ 1998, ಅಕ್ಟೋಬರ್ ನಲ್ಲಿ ಅಳಿವಿನಂಚಿನಲ್ಲಿರುವ ಗೆಜೆಲ್ಲೆ ಸಂತತಿಗಳನ್ನು ಸಾಯಿಸಿದ್ದ ಆರೋಪ ಕೇಳಿ ಬಂದಿದ್ದು, ಅವರ ಮೇಲೆ ಪ್ರಕರಣ ದಾಖಲಾಗಿತ್ತು.
ತಮ್ಮ ಪಾಪ ಕೃತ್ಯದ ಬಗ್ಗೆ ಸಲ್ಮಾನ್ ಖಾನ್ ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂಬುದನ್ನು ಗಮನಿಸಿದ ರಾಜಸ್ಥಾನ್ ಹೈಕೋರ್ಟ್ ಅದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತಂದಿತ್ತು.