ಬಿಎಸ್​ವೈಗೆ ತಾಕತ್ತಿದ್ರೆ ಮುಂದೆ ಬಂದು ಯುದ್ಧ ಮಾಡಲಿ ಎಂದು ಇದೇ ವೇಳೆ ಪದ್ಮನಾಭ ಪ್ರಸನ್ನ ಆಕ್ರೊಶ ವ್ಯಕ್ತಪಡಿಸಿದರು.

ಬೆಂಗಳೂರು (ಅ.28): ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಮೇಲೆ ಮತ್ತೆ ಮಸಿ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಇವತ್ತು ಪ್ರೆಸ್​ಕ್ಲಬ್​ಗೆ ಬಂದಿದ್ದ ಪದ್ಮನಾಭ ಪ್ರಸನ್ನ ಮೇಲೆ ಮಸಿ ದಾಳಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ ಮಾತಾಡಿದ ಪದ್ಮನಾಭ ಪ್ರಸನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಬಾಡಿಗೆ ಗೂಂಡಾಗಳು ತಮ್ಮ ಮೇಲೆ ಮಸಿ ಎರಚಿ ಹೋದ್ರು ಎಂದು ಆರೋಪಿಸಿದ್ದಾರೆ.

ಪತ್ರಕರ್ತರ ವೇಷದಲ್ಲಿದ್ದವರ ಮೂರ್ನಾಲ್ಕು ಜನ ತಮ್ಮ ಮೇಲೆ ಏಕಾಏಕಿ ಮಸಿ ಎರಚಿದರು. ಬಿಎಸ್​ವೈಗೆ ತಾಕತ್ತಿದ್ರೆ ಮುಂದೆ ಬಂದು ಯುದ್ಧ ಮಾಡಲಿ ಎಂದು ಇದೇವೇಳೆ ಪದ್ಮನಾಭ ಪ್ರಸನ್ನ ಆಕ್ರೊಶ ವ್ಯಕ್ತಪಡಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ವಿವಾಹಿತರು ಎಂದು ಆರೋಪ ಮಾಡುವ ಸಲುವಾಗಿ ಸುದ್ದಿಗೋಷ್ಠಿ ನಡೆಸಲು ಅನುಮತಿ ಪಡೆಯಲು ಪದ್ಮನಾಭ ಪ್ರಸನ್ನ ಪ್ರೆಸ್​ಕ್ಲಬ್​ಗೆ ಬಂದಿದ್ದರು.