ನವೆಂಬರ್ 9 ರಂದು ಪಾಕಿಸ್ತಾನದಲ್ಲಿ ಕರ್ತಾರ್ಪುರ್ ಕಾರಿಡಾರ್ ಉದ್ಘಾಟನೆ| ಪಾಕಿಸ್ತಾನಕ್ಕೆ ಹೋಗಲು ಅನುಮತಿ ಕೋರಿದ ನವಜೋತ್ ಸಿಧು| ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ಗೆ ಪತ್ರ| 'ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪಾಕ್ ಗೆ ತೆರಳಲು ಅನುಮತಿ ಕೊಡಿ'|
ನವದೆಹಲಿ(ನ.02): ನವೆಂಬರ್ 9 ರಂದು ಪಾಕಿಸ್ತಾನದಲ್ಲಿ ನಡೆಯುವ ಕರ್ತಾರ್ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು ಎಂದು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಮನವಿ ಮಾಡಿದ್ದಾರೆ.
ಕರ್ತಾರ್ಪುರ ಉದ್ಘಾಟನೆಗೆ ಸಿಂಗ್ಗೆ ಇಮ್ರಾನ್ ಅಧಿಕೃತ ಆಹ್ವಾನ!
ಕರ್ತಾರ್ಪುರ್: ಗುರು-ಭಕ್ತರನ್ನು ಬೆಸೆಯುವ ಅಪರೂಪದ ಕಾರಿಡಾರ್!
ಈ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಪತ್ರ ಬರೆದಿರುವ ಸಿಧು, ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನಕ್ಕೆ ಹೋಗಲು ಅನುಮತಿಗಾಗಿ ಮನವಿ ಮಾಡಿದ್ದಾರೆ.
Punjab Chief Minister Captain Amarinder Singh has forwarded Congress leader Navjot Singh Sidhu’s letter, requesting permission to visit Pakistan for the #KartarpurCorridor inauguration, to the Chief Secretary for necessary action. (file pics) pic.twitter.com/gGK651PXdt
— ANI (@ANI) November 2, 2019
ಕರ್ತಾರ್ಪುರ್ ಕಾರಿಡಾರ್ ಯೋಜನೆಗೆ ಸಹಿ ಹಾಕಿದ ಭಾರತ-ಪಾಕಿಸ್ತಾನ!
ಕಾರಿಡಾರ್ ಉದ್ಘಾಟನೆಗಾಗಿ ಪಾಕಿಸ್ತಾನ ತಮಗೆ ಆಹ್ವಾನ ನೀಡಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪಾಕ್ ಗೆ ತೆರಳಲು ಅನುಮತಿ ನೀಡಬೇಕು ಎಂದು ಸಿಧು ಮನವಿ ಮಾಡಿದ್ದಾರೆ.
Last Updated 2, Nov 2019, 9:05 PM IST