ಆಸ್ಪತ್ರೆಗೆ ಪ್ರತಾಪ್ ಸಿಂಹ ಭೇಟಿ; ದರ್ಶನ್ ಆರೋಗ್ಯ ವಿಚಾರಣೆ
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ | ಸಂಸದ ಪ್ರತಾಪ್ ಸಿಂಹ ಕೊಲಂಬಿಯಾ ಆಸ್ಪತ್ರೆಗೆ ಭೇಟಿ | ಸಾರಥಿ ಆರೋಗ್ಯ ವಿಚಾರಿಸಿದ ಸಂಸದ
ಮೈಸೂರು (ಸೆ. 26): ಕಾರು ಅಪಘಾತ ಪ್ರಕರಣದಲ್ಲಿ ನಟ ದರ್ಶನ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ರಾಜಕೀಯ, ಸಿನಿಮಾ ರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಇಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ದರ್ಶನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಶಿವಣ್ಣನಾನು ಕೆಂಚಾಲೋ ಮಂಚಾಲೋ ಕಾಲದಿಂದಲೂ ಅವರ ಅಭಿಮಾನಿ. ದರ್ಶನ್ ಈಗ ಆರೋಗ್ಯವಾಗಿದ್ದಾರೆ. ಅಪಘಾತದಲ್ಲಿ ಕೈ ಮೂಳೆ ಮುರಿದು ಸ್ವಲ್ಪ ಗಾಯವಾಗಿದೆ. ಬಿಡುವಿಲ್ಲದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ ಅವರಿಗೆ ಇದು ವೆಲ್ಕಮ್ ಬ್ರೇಕ್ ಆಗಿದೆ. ಅವರು ಸ್ವಲ್ಪ ದಿನ ವಿಶ್ರಾಂತಿ ಪಡೆಯಲಿ ಎಂದು ನಟ ದರ್ಶನ್ ಭೇಟಿಯ ನಂತರ ಸಂಸದ ಪ್ರತಾಪ್ಸಿಂಹ ಹೇಳಿದ್ದಾರೆ.
ವಿರೋಧ ಮರೆತು ನಟ ದರ್ಶನ್ ಆರೋಗ್ಯ ವಿಚಾರಿಸಿದ ನಾಯಕ