ಅತ್ತ ರಾಜಧಾನಿಯಲ್ಲಿ ಡಿಕೆ ಶಿವಕುಮಾರ್ ಅರೆಸ್ಟ್ ಆಗುತ್ತಿದ್ದಂತೆಯೇ ಇತ್ತ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಮತ್ತೊಂದೆಡೆ ಮಗನ ಬಂಧನದ ಸುದ್ದಿ ಕೇಳಿ ತಾಯಿ ಅಸ್ವಸ್ಥಗೊಂಡಿದ್ದಾರೆ.     

ರಾಮನಗರ, [ಸೆ.03]:  ನವದೆಹಲಿಯಲ್ಲಿ ಮಗ ಡಿಕೆ ಶಿವಕುಮಾರ್ ಅರೆಸ್ಟ್ ಆಗಿರುವ ಸುದ್ದಿ ಕೇಳುತ್ತಿದ್ದಂತೆಯೇ ತಾಯಿ ಗೌರಮ್ಮ ಅಸ್ವಸ್ಥಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

‘ಡಿಕೆ ಮುಕ್ತವಾಗಿ ಬಂದರೆ ಸಂತಸ ಪಡುವವ ನಾನು’ BSY ಅಚ್ಚರಿ

ಕನಕಪುರ ನಿವಾಸದಲ್ಲಿರುವ ಗೌರಮ್ಮ ಮಗ ಬಂಧನವಾದ ಸುದ್ದಿ ಕೇಳಿ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾರೆ. ಕೂಡಲೇ ಸಂಬಂಧಿಗಳು ಮನೆಗೆ ವೈದ್ಯರನ್ನು ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಎರಡೇ ಎರಡು ಪ್ರಶ್ನೆಯೇ ಡಿಕೆಶಿ ಅರೆಸ್ಟ್ ಆಗಲು ಕಾರಣವಾಯ್ತು..!

ಮಗನ ಬಂಧನದಿಂದ ಹೈ ಬಿ.ಪಿಯಿಂದ ಅಸ್ವಸ್ಥಗೊಂಡಿದ್ದಾರೆ. ನಿನ್ನೆ ಗೌರಿ ಗಣೇಶ ಹಬ್ಬದಿನಂದು ವಿಚಾರಣೆಯಿಂದ ವಿನಾಯಿತಿ ಕೊಡಲಿಲ್ಲವೆಂದು ಡಿಕೆಶಿ ಅವರು ದೆಹಲಿಯಲ್ಲಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದುರು. ಇತ್ತ ಮಗನ ಪರಿಸ್ಥಿತಿ ಕಂಡು ತಾಯಿ ಗೌರಮ್ಮ ಕಣ್ಣೀರು ಹಾಕಿದ್ದರು.