ಮನ್ ಕೀ ಬಾತ್'ನಲ್ಲಿ ಜಮ್ಮು ಕಾಶ್ಮೀರದ ಉರಿ ದಾಳಿಯ ಬಗ್ಗೆ ನೋವು ತೋಡಿಕೊಂಡ ಮೋದಿ
ಬೆಂಗಳೂರು(ಸೆ.25): ಅನೇಕ ಕೇಳುಗರನ್ನು ಮಂತ್ರ ಮುಗ್ದರನ್ನಾಗಿಸಿ ಕೇಳುಗರಿಗೆ ಮನದಾಳದಿಂದ ಸಮಾಧಾನ ಶಾಂತಿ ಶುಭಾಶಯ ಕೋರುವ ನೆಚ್ಚಿನ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಈಗ 2 ವರ್ಷ. ಆಕಾಶವಾಣಿಯಲ್ಲಿ ನಮೋ ತಮ್ಮ 24ನೇ ಮನದಾಳ ಮಾತುಗಳನ್ನು ಬಿಚ್ಚಿ ಇಟ್ಟಿದ್ದಾರೆ.
ಪ್ರಮುಖವಾಗಿ ಜಮ್ಮು ಕಾಶ್ಮೀರದ ಉರಿ ದಾಳಿಯ ಬಗ್ಗೆ ನೋವು ತೋಡಿಕೊಂಡ ಮೋದಿ ಕಾಶ್ಮೀರದ ಜನತೆ ಈಗ ಶಾಂತಿಯನ್ನು ಭಯಸುತ್ತಿದ್ದಾರೆ ಕಾಶ್ಮೀರದ ಜನತೆಗೆ ಸತ್ಯದ ಅರಿವಾಗಿದೆ ಎಂದು ಮಾತನಾಡಿದ ನಮೋ ದೀಪಾ ಮಲ್ಲಿಕ ಸಾಧನೆಯನ್ನು ಕೊಂಡಾಡುವುದರೊಂದಿಗೆ ಪ್ಯಾರಾ ಒಲಿಂಪಿಕ್ಸ್ ಸಾಧಕರಿಗೆ ಸಹ ಅಭಿನಂದನೆಯನ್ನೂ ಕೋರಿದ್ದಾರೆ.