Asianet Suvarna News Asianet Suvarna News

ಅಂದು ರೇವಣ್ಣ ಬಿಸ್ಕತ್​ ಎಸೆದಂತೆ, ಇಂದು ದೇಶಪಾಂಡೆ ಎಸೆದಿದ್ದೇನು ಗೊತ್ತಾ?

ಕೊಡಗುಸಂತ್ರಸ್ತರಿಗೆ ಬಿಸ್ಕತ್​ ಎಸೆದು ವಿವಾದವನ್ನ  ಸಚಿವ ಎಚ್.ಡಿ. ರೇವಣ್ಣ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಮತ್ತೊಬ್ಬ ಸಚಿವ ಆರವ.ವಿ ದೇಶಪಾಂಡೆ ಸರದಿ. ಏನು ಮಾಡಿದ್ರು? ಇಲ್ಲಿದೆ ವಿವರ.

Minister RV Deshpande throw sports gift in function at Karwar
Author
Bengaluru, First Published Oct 31, 2018, 6:48 PM IST

ಕಾರವಾರ, [ಅ.31]: ಇತ್ತೀಚೆಗೆ ಕೊಡಗು ಸಂತ್ರಸ್ತರಿಗೆ ಬಿಸ್ಕತ್​ ಎಸೆದು ವಿವಾದವನ್ನ  ಸಚಿವ ಎಚ್.ಡಿ. ರೇವಣ್ಣ ಮೈಮೇಲೆ ಎಳೆದುಕೊಂಡಿದ್ದರು.

ಇದರ ಬೆನ್ನಲ್ಲೇ ಸಚಿವ ಆರ್​.ವ್ಹಿ ದೇಶಪಾಂಡೆ, ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಎಸೆದು ದರ್ಪ ಮೆರೆದಿದ್ದಾರೆ.

ಪ್ರಾಣಿಗಳಿಗೆ ಎಸೆಯೋ ರೀತಿ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಅವಮಾನಿಸಿದ ಸಚಿವ ರೇವಣ್ಣ!

ಹಳಿಯಾಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಆರ್​.ವಿ.ದೇಶಪಾಂಡೆ ಕ್ರೀಡಾ ಪಟುಗಳಿಗೆ ಸಾಮಗ್ರಿಗಳನ್ನು ವಿತರಿಸುವ ವೇಳೆ,  ಕ್ರೀಡಾ ಪಟುಗಳು ವೇದಿಕೆಗೆ ಬರಲು ಕೊಂಚ ತಡವಾಗಿದೆ.

ಇದರಿಂದ ಕೆರಳಿದ ಸಚಿವರು ಕ್ರೀಡಾ ಪಟುಗಳು ಕುಳಿತಿದ್ದ ಸ್ಥಳಕ್ಕೆ ಕ್ರೀಡಾ ಸಾಮಗ್ರಿಗಳನ್ನು ಎಸೆದಿದ್ದಾರೆ. ಸಚಿವರ ಈ ವರ್ತನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.

 ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳು ಹಾಗೂ ಕ್ರೀಡಾ ಸಂಘಗಳಿಗೆ ಈ ಮೂಲಕ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

Follow Us:
Download App:
  • android
  • ios