ಶ್ರೀನಗರ ಹೊರ ವಲಯದ ಝಾಕೂರ ಬಳಿ ಸಂಜೆ 7 ಗಂಟೆಯಲ್ಲಿ ಏಕಾಏಕಿ ಉಗ್ರರು ಮೂರು ಸೇನಾ ವಾಹನಗಳ ದಾಳಿ ನಡೆಸಿದ್ದಾರೆ.
ಶ್ರೀನಗರ(ಅ.14): ಶಸ್ತ್ರಾಸ್ತ್ರ ಸೀಮಾ ದಳದ ಕ್ಯಾಂಪ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಒಬ್ಬ ಯೋಧ ಹುತಾತ್ಮನಾಗಿ ಶಸ್ತ್ರಾಸ್ತ್ರ ಸೀಮಾ ದಳದ 8 ಯೋಧರು ಗಾಯಗೊಂಡಿದ್ದಾರೆ. ಶ್ರೀನಗರ ಹೊರ ವಲಯದ ಝಾಕೂರ ಬಳಿ ಸಂಜೆ 7 ಗಂಟೆಯಲ್ಲಿ ಏಕಾಏಕಿ ಉಗ್ರರು ಮೂರು ಸೇನಾ ವಾಹನಗಳ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಸೇನೆ ಮತ್ತು ಪೊಲೀಸರು ಉಗ್ರರಿಗಾಗಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
