MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Crime
  • ಕಳ್ಳತನವನ್ನೂ ಮಾಡಿದ್ರು, ಟೀ ಮಾಡ್ಕೊಂಡು ಕುಡಿದು ಹೋದ್ರು: ಶಿರಸಿಯಲ್ಲಿ ಕೈಚಳಕ ತೋರಿಸಿದ ಕೂಲ್ ಕಳ್ಳರು

ಕಳ್ಳತನವನ್ನೂ ಮಾಡಿದ್ರು, ಟೀ ಮಾಡ್ಕೊಂಡು ಕುಡಿದು ಹೋದ್ರು: ಶಿರಸಿಯಲ್ಲಿ ಕೈಚಳಕ ತೋರಿಸಿದ ಕೂಲ್ ಕಳ್ಳರು

Theft and tea break cool thieves steal and drink tea in Sirsi ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

2 Min read
Author : Sushma Hegde
Published : Jul 30 2026, 02:41 PM IST
Share this Photo Gallery
  • FB
  • TW
  • Linkdin
  • Whatsapp
15
ಉತ್ತರ ಕನ್ನಡ ಕಳ್ಳತನ
Image Credit : Asianet News

ಉತ್ತರ ಕನ್ನಡ ಕಳ್ಳತನ

ಸಾಮಾನ್ಯವಾಗಿ ಕಳ್ಳರು ಮನೆಗೆ ನುಗ್ಗಿ ಚಿನ್ನ, ಹಣ ದೋಚಿಕೊಂಡು ಸದ್ದಿಲ್ಲದೆ ಪರಾರಿಯಾಗುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳ್ಳತನಕ್ಕೆ ಬಂದ ಖದೀಮರು ಚಿನ್ನ, ಹಣ ದೋಚಿದ ಬಳಿಕ ಮನೆಯಲ್ಲಿ ಗ್ಯಾಸ್ ಆನ್ ಮಾಡಿ, ಸ್ವತಃ ಟೀ ಮಾಡಿಕೊಂಡು ಕುಡಿದು ಬಳಿಕ ಆರಾಮವಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
10 ದಿನದಲ್ಲಿ 3 ಮನೆಗಳಿಗೆ ಕನ್ನ
Image Credit : Asianet News

10 ದಿನದಲ್ಲಿ 3 ಮನೆಗಳಿಗೆ ಕನ್ನ

ಮುಂಡಗೋಡ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಎನ್ನಲಾಗಿದ್ದು, ಕೇವಲ ಹತ್ತು ದಿನಗಳ ಅವಧಿಯಲ್ಲಿ ಮೂರು ಮನೆಗಳನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ. ಪಟ್ಟಣದ ಹಳೂರು ಮಾರಿಕಾಂಬಾ ನಗರದಲ್ಲಿ ರಾತ್ರಿ ವೇಳೆ ಸತತವಾಗಿ ಎರಡು ಮನೆಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಈ ಪೈಕಿ ಒಂದು ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

35
ಚಿನ್ನ, ಹಣದ ಜೊತೆಗೆ ಹುಂಡಿಗೂ ಕನ್ನ
Image Credit : Asianet News

ಚಿನ್ನ, ಹಣದ ಜೊತೆಗೆ ಹುಂಡಿಗೂ ಕನ್ನ

ಮಾರಿಕಾಂಬಾ ನಗರದ ನಿವಾಸಿ ಬಾಷಾ ಮರಗಡಿ ಅವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ಸುಮಾರು 2.5 ಗ್ರಾಂ ಚಿನ್ನ ಹಾಗೂ ₹3,000 ನಗದನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೇ ಸುಮ್ಮನಾಗದ ಖದೀಮರು, ಮನೆಯಲ್ಲಿದ್ದ ಹುಂಡಿಯನ್ನೂ ಒಡೆದು ಅದರಲ್ಲಿದ್ದ ಹಣವನ್ನೂ ದೋಚಿದ್ದಾರೆ. ಇದೇ ವೇಳೆ ಶಂಕರ ಕುರುಬರ ಎಂಬುವವರ ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೂಡ ವರದಿಯಾಗಿದೆ.

45
ಕಳ್ಳತನದ ಬಳಿಕ ಟೀ ಬ್ರೇಕ
Image Credit : Asianet News

ಕಳ್ಳತನದ ಬಳಿಕ ಟೀ ಬ್ರೇಕ

ಈ ಕಳ್ಳತನ ಪ್ರಕರಣದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ವಿಚಾರವೆಂದರೆ ಕಳ್ಳರ ವಿಚಿತ್ರ ವರ್ತನೆ. ಕಳ್ಳತನ ಮಾಡಿದ ಮನೆಯೊಂದರಲ್ಲಿ ಖದೀಮರು ಸ್ವತಃ ಟೀ ಮಾಡಿಕೊಂಡು ಕುಡಿದಿದ್ದಾರೆ ಎನ್ನಲಾಗಿದೆ. ಅಂದರೆ, ಚಿನ್ನ, ಹಣ ದೋಚಿದ ಬಳಿಕ ಅವಸರದಲ್ಲಿ ಓಡಿಹೋಗುವ ಬದಲು ಮನೆಯಲ್ಲೇ ಟೀ ಮಾಡಿಕೊಂಡು ಕುಡಿದು, ಬಳಿಕ ಆರಾಮವಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

55
ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ
Image Credit : Asianet News

ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ

ಪಟ್ಟಣದಲ್ಲಿ ಸರಣಿ ಕಳ್ಳತನದ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಸುಳಿವು ಪತ್ತೆಹಚ್ಚಲು ಶ್ವಾನದಳದ ಮೂಲಕವೂ ಶೋಧ ಕಾರ್ಯ ನಡೆಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಕಳ್ಳತನದ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಜನರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಕ್ರೈಮ್ ನ್ಯೂಸ್
ಉತ್ತರ ಕನ್ನಡ
ಸುದ್ದಿ
Latest Videos
Recommended Stories
Recommended image1
Johnson & Johnson ಪೌಡರ್​ನಿಂದ ಕ್ಯಾನ್ಸರ್​: 53 ಸಾವಿರ ಕೋಟಿ ರೂ. ಪರಿಹಾರ ನೀಡಲು ಕಂಪೆನಿ ಒಪ್ಪಿಗೆ
Recommended image2
Lift Accident: ಲಿಫ್ಟ್ ದುರ್ಘಟನೆಗೆ ಯಾರು ಹೊಣೆ ? ಮೂವರ ಹೆಸರು ಸೂಚಿಸಿದ ಸುಪ್ರೀಂ ಕೋರ್ಟ್
Recommended image3
ಸಂಬಳ ಕೇವಲ 12 ಸಾವಿರ, ಬ್ಯಾಂಕ್‌ನಲ್ಲಿ ಲಕ್ಷ ಲಕ್ಷ ಹಣ! ಕ್ಲಾಸ್‌ರೂಮ್‌ನಿಂದಲೇ ಡ್ರಗ್ಸ್ ದಂಧೆ ನಡೆಸುತ್ತಿದ್ದ 3 ಲೇಡಿ ಟೀಚರ್ಸ್ ಅಂದರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved