Asianet Suvarna News Asianet Suvarna News

ಕದಿಯಲು ಹೋಗಿ ಹಸುವಿನಿಂದಲೇ ವ್ಯಕ್ತಿ ಸಾವು?

ಹಸು ಕದಿಯಲು ಹೋಗಿ ವ್ಯಕ್ತಿ ಅನುಮಾನಾಸ್ಪದ ಸಾವು | ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಈ ಘಟನೆ ನಡೆದಿದೆ 

man dies while stealing cow in Hassan district Channarayapattana
Author
Bengaluru, First Published Jun 24, 2019, 12:29 PM IST

ಹಾಸನ (ಜೂ. 24): ಹಸು ಕದಿಯಲು ಹೋಗಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ  ಚನ್ನರಾಯಪಟ್ಟಣ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ನಡೆದಿದೆ. 

ಗೋವಿಂದಪ್ಪ(55 ) ಮೃತ ವ್ಯಕ್ತಿ. ಹಸುವನ್ನು ಕದ್ದು ಸಾಗಿಸುವ ವೇಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.  

ಕದ್ದ ಹಸುವನ್ನ ವಾಹನಕ್ಕೆ ತುಂಬಿಸುವ ವೇಳೆ ಗೋವಿಂದಪ್ಪನ ಮರ್ಮಾಂಗಕ್ಕೆ ಹಸು ಒದ್ದಿದೆ.  ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿರೊ ಶಂಕೆ ವ್ಯಕ್ತವಾಗಿದೆ.  ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮೃತನ‌ ಶವ ಪತ್ತೆಯಾಗಿದೆ.  ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios