ಮೂರು ದಿನಗಳಲ್ಲಿ  ನೋಟ್​ ನಿಷೇಧ​ ಹಿಂಪಡೆಯಲಿ, ಇಲ್ಲವಾದರೆ  ಹೋರಾಟ ಎದುರಿಸಲು ಸಿದ್ಧರಾಗಿ ಎಂದು ಮಮತಾ ಬ್ಯಾನರ್ಜಿ ಸವಾಲೊಡಿದ್ದಾರೆ. 

ನವದೆಹಲಿ (ನ.17): ದೊಡ್ಡ ಮುಖಬೆಲೆಯ ನೋಟುಗಳ ಅಪಮೌಲ್ಯೀಕರಣದಿಂದ ಕೇಂದ್ರ ಸರ್ಕಾರ ಜನರ ಜೀವ ಹಿಂಡುತ್ತಿದ್ದು, ಈ ಕೂಡಲೇ ನಿರ್ಧಾರ ವಾಪಸು​ ಪಡೆಯಬೇಕು ಎಂದು ಆಗ್ರಹಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಇಂದೂ ಕೂಡ ದೆಹಲಿಯಲ್ಲಿ ಪ್ರತಿಭಟನ ನಡೆಯಿತು.

ಈ ವೇಳೆ ಮಾತನಾಡಿದ ದೀದಿ, ಪ್ರಧಾನಿ ಮೋದಿ ದೇಶವನ್ನು ಮಾರಾಟ ಮಾಡಲು ಹೊರಟ್ಟಿದ್ದೀರಾ?, ನಾವು ದಿನನಿತ್ಯ ಎಟಿಎಂ ತಿನ್ನೋಕಾಗುತ್ತಾ.? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂರು ದಿನಗಳಲ್ಲಿ ನೋಟ್​ ನಿಷೇಧ​ ಹಿಂಪಡೆಯಲಿ, ಇಲ್ಲವಾದರೆ ಹೋರಾಟ ಎದುರಿಸಲು ಸಿದ್ಧರಾಗಿ ಎಂದು ಮಮತಾ ಬ್ಯಾನರ್ಜಿ ಸವಾಲೊಡಿದ್ದಾರೆ. 

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್​, ಕಪ್ಪು ಹಣದ ಹೆಸರಲ್ಲಿ ಕೇಂದ್ರದ ಭ್ರಷ್ಟಾಚಾರ ನಡೆಸುತ್ತಿದೆ. ಮೋದಿ ನಡೆ ಭ್ರಷ್ಠಾಚಾರದ ವಿರುದ್ಧವಾಗಿಲ್ಲ ಎಂದು ಕಿಡಿಕಾರಿದರು.