ಅಕ್ಕ ಪಕ್ಕದಲ್ಲೇ ಕುಳಿತರೂ ಮಾತನಾಡದ ಹೆಬ್ಬಾಳ್ಕರ್ - ಜಾರಕಿಹೊಳಿ
ಕೆಲವು ದಿನಗಳ ಹಿಂದೆ ಬೆಳಗಾವಿ ಪಿ ಎಲ್ ಡಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಬಹಿರಂಗವಾಗಿಯೇ ಸ್ಪರ್ಧೆ ಏರ್ಪಟ್ಟು ಸಮ್ಮಿಶ್ರ ಸರ್ಕಾರಕ್ಕೂ ತೊಂದರೆಯಾಗಿ ಪರಿಣಮಿಸಿತ್ತು. ಅಂತಿಮವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಜಯಗಳಿಸಿ ಹಿರಿಯ ನಾಯಕರ ಸಂಧಾನದ ಮೂಲಕ ವೈಮಸ್ಸು ದೂರವಾಗಿತ್ತು.
ಜಮಖಂಡಿ[ಅ.25]: ಆನಂದ್ ನ್ಯಾಮಗೌಡ ಪರ ಪ್ರಚಾರಕ್ಕೆ ಆಗಮಿಸಿದ ಬೆಳಗಾವಿ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಅಕ್ಕಪಕ್ಕದಲ್ಲಿ ಕುಳಿತರೂ ಇಬ್ಬರೂ ಮಾತನಾಡಲಿಲ್ಲ.
ಭಾಷಣದ ಮಧ್ಯೆ ಆಗಮಿಸಿದ ಸತೀಶ್ ಜಾರಕಿಹೊಳಿ ಅವರನ್ನು ಲಕ್ಷ್ಮಿ ಹೆಬ್ಬಾಳ್ಕರ್ ಸ್ವಾಗತಿಸಿದರು. ಜಮಖಂಡಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿ ಇದು ನಮ್ಮ ಮರ್ಯಾದೆ ಪ್ರಶ್ನೆ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ಮತ ನೀಡಿ ನಮ್ಮ ಮರ್ಯಾದೆ ಉಳಿಸಿ ಎಂದು ಮತದಾರರನ್ನು ಕೇಳಿಕೊಂಡರು. ತದ ನಂತರ ಇಬ್ಬರೂ ಅಕ್ಕಪಕ್ಕದಲ್ಲೂ ಕುಳಿತರೂ ಮಾತನಾಡಲಿಲ್ಲ.
ಕೆಲವು ದಿನಗಳ ಹಿಂದೆ ಬೆಳಗಾವಿ ಪಿ ಎಲ್ ಡಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಬಹಿರಂಗವಾಗಿಯೇ ಸ್ಪರ್ಧೆ ಏರ್ಪಟ್ಟು ಸಮ್ಮಿಶ್ರ ಸರ್ಕಾರಕ್ಕೂ ತೊಂದರೆಯಾಗಿ ಪರಿಣಮಿಸಿತ್ತು. ಅಂತಿಮವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಜಯಗಳಿಸಿ ಹಿರಿಯ ನಾಯಕರ ಸಂಧಾನದ ಮೂಲಕ ವೈಮಸ್ಸು ದೂರವಾಗಿತ್ತು.
"