ಸಂಚಾರಿ ನಿಯಮ ಉಲ್ಲಂಘಿಸುವುದಲ್ಲದೇ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿಯುವ ಹಲವಾರು ಪ್ರಕರಣ ಪ್ರತಿದಿನ ಕಾಣುತ್ತೇವೆ. ಆದರೆ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ನಿಯಮ ಪರಿಪಾಲನೆ ತಪ್ಪಿದ್ದಕ್ಕೆ ದಂಡ ಪಾವತಿ ಮಾಡಿದ್ದಾರೆ. 

ತಿರುವನಂತಪುರ[ಜು.5] ತಮ್ಮ ಅಧಿಕೃತ ವಾಹನ ವೇಗ ಮಿತಿ ಉಲ್ಲಂಘಿಸಿದ್ದಕ್ಕೆ ಕೇರಳ ರಾಜ್ಯಪಾಲರು 400 ರೂ. ದಂಡ ಪಾವತಿಸಿದ್ದಾರೆ. ಕೇರಳ ರಾಜ್ಯಪಾಲ ಪಿ ಸದಾಶಿವಂ ದಂಡ ಪಾವತಿಸಿದ್ದು ಮಾದರಿ ವರ್ತನೆ ತೋರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಪ್ರಿಲ್‌ 7ರಂದು ರಾಜ್ಯಪಾಲರ ಅಧಿಕೃತ ವಾಹನ ವೇಗ ಮಿತಿ ಉಲ್ಲಂಘನೆ ಮಾಡಿತ್ತು. ಆ ಕಾರಣಕ್ಕಾಗಿ ದಂಡ ಹೇರಲಾಗಿತ್ತು. ಈ ದಂಡ ಮೊತ್ತವನ್ನು ಪಾವತಿಸುವಂತೆ ರಾಜ್ಯಪಾಲರು ತನ್ನ ಕಾರ್ಯಾಲಯದ ಅಧಿಕಾರಿಗೆ ಸೂಚಿಸಿದ್ದರು.

ನ್ಯಾಯಮೂರ್ತಿಯಾಗಿದ್ದ ಸದಾಶಿವಂ ಅವರು ಟ್ರಾಫಿಕ್‌ ನಿಯಮ ಉಲ್ಲಂಘನೆ ವಾಹನದಲ್ಲಿ ಇರಲಿಲ್ಲ. ಕೇವಲ ಪ್ರಕರಣ ದಾಖಲಾಗಿದ್ದು ಸಂದೇಶ ರಾಜ್ಯಪಾಲರನ್ನು ತಲುಪಿತ್ತು. ಹಾಗಿದ್ದರೂ ದಂಡ ಪಾವತಿಯ ಆದೇಶವನ್ನು ಪಾಲಿಸಿದ್ದಾರೆ.