ಇದಪ್ಪಾ ಸುದ್ದಿ.. ರಾಜ್ಯಪಾಲರೇ ದಂಡ ಪಾವತಿಸಿದರು!
ಸಂಚಾರಿ ನಿಯಮ ಉಲ್ಲಂಘಿಸುವುದಲ್ಲದೇ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿಯುವ ಹಲವಾರು ಪ್ರಕರಣ ಪ್ರತಿದಿನ ಕಾಣುತ್ತೇವೆ. ಆದರೆ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ನಿಯಮ ಪರಿಪಾಲನೆ ತಪ್ಪಿದ್ದಕ್ಕೆ ದಂಡ ಪಾವತಿ ಮಾಡಿದ್ದಾರೆ.
ತಿರುವನಂತಪುರ[ಜು.5] ತಮ್ಮ ಅಧಿಕೃತ ವಾಹನ ವೇಗ ಮಿತಿ ಉಲ್ಲಂಘಿಸಿದ್ದಕ್ಕೆ ಕೇರಳ ರಾಜ್ಯಪಾಲರು 400 ರೂ. ದಂಡ ಪಾವತಿಸಿದ್ದಾರೆ. ಕೇರಳ ರಾಜ್ಯಪಾಲ ಪಿ ಸದಾಶಿವಂ ದಂಡ ಪಾವತಿಸಿದ್ದು ಮಾದರಿ ವರ್ತನೆ ತೋರಿದ್ದಾರೆ.
ಏಪ್ರಿಲ್ 7ರಂದು ರಾಜ್ಯಪಾಲರ ಅಧಿಕೃತ ವಾಹನ ವೇಗ ಮಿತಿ ಉಲ್ಲಂಘನೆ ಮಾಡಿತ್ತು. ಆ ಕಾರಣಕ್ಕಾಗಿ ದಂಡ ಹೇರಲಾಗಿತ್ತು. ಈ ದಂಡ ಮೊತ್ತವನ್ನು ಪಾವತಿಸುವಂತೆ ರಾಜ್ಯಪಾಲರು ತನ್ನ ಕಾರ್ಯಾಲಯದ ಅಧಿಕಾರಿಗೆ ಸೂಚಿಸಿದ್ದರು.
ನ್ಯಾಯಮೂರ್ತಿಯಾಗಿದ್ದ ಸದಾಶಿವಂ ಅವರು ಟ್ರಾಫಿಕ್ ನಿಯಮ ಉಲ್ಲಂಘನೆ ವಾಹನದಲ್ಲಿ ಇರಲಿಲ್ಲ. ಕೇವಲ ಪ್ರಕರಣ ದಾಖಲಾಗಿದ್ದು ಸಂದೇಶ ರಾಜ್ಯಪಾಲರನ್ನು ತಲುಪಿತ್ತು. ಹಾಗಿದ್ದರೂ ದಂಡ ಪಾವತಿಯ ಆದೇಶವನ್ನು ಪಾಲಿಸಿದ್ದಾರೆ.