Asianet Suvarna News Asianet Suvarna News

ತಿರುವನಂತಪುರದಲ್ಲಿ RSS ಕಾರ್ಯಕರ್ತನ ಕೊಲೆ: ಘಟನೆ ಖಂಡಿಸಿ ಇಂದು ಕೇರಳ ಬಂದ್

ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಆರ್‌‌ಎಸ್‌‌ಎಸ್‌‌ ಕಾರ್ಯಕರ್ತನೋರ್ವನನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

Kerala Bundh

ತಿರುವನಂತಪುರಂ(ಜು.30): ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಆರ್‌‌ಎಸ್‌‌ಎಸ್‌‌ ಕಾರ್ಯಕರ್ತನೋರ್ವನನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

ಎ.ರಾಜೇಶ್‌ ಕೊಲೆಯಾದ ಆರ್‌‌ಎಸ್‌‌ಎಸ್‌‌ ಕಾರ್ಯಕರ್ತನಾಗಿದ್ದು, ಸಿಪಿಐ-ಎಂ ಪಕ್ಷದ ಕಾರ್ಯಕರ್ತರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಶನಿವಾರ ರಾತ್ರಿ ರಾಜೇಶ್‌ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ನಂತರ ರಾಜೇಶ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ರಾಜೇಶ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ರಾಜೇಶ್‌‌ ಕೊಲೆ ಹಿಂದೆ ಸಿಪಿಐ-ಎಂ ಪಕ್ಷದ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ, ಇಂದು ಕೇರಳದಾದ್ಯಂತ ಬಿಜೆಪಿ ಬಂದ್‌ ಕರೆ ನೀಡಿದೆ.

 

Latest Videos
Follow Us:
Download App:
  • android
  • ios