ಬಿಗ್ ಬ್ರೇಕಿಂಗ್: ದೋಸ್ತಿ ಸರ್ಕಾರದ ಮತ್ತೊಂದು ವಿಕೆಟ್ ಪತನ, ಈ ಸಾರಿ ಸಚಿವ?
ಮುಂಬೈಯೂ ಅಲ್ಲ ಬೆಂಗಳೂರು ಅಲ್ಲ ಇದು ಬೀದರ್ ನಿಂದ ಬಂದಿರುವ ಬಿಗ್ ಬ್ರೇಕಿಂಗ್ ಸುದ್ದಿ. ಮೈತ್ರಿ ಸರ್ಕಾರದ ಇನ್ನೊಂದು ವಿಕೆಟ್ ಪತನವಾಗಿದೆ ಎಂಬ ಸುದ್ದಿ ಗಟ್ಟಿಯಾಗುತ್ತಿದೆ. ಈ ಬಾರಿ ಶಾಸಕರ ರಾಜೀನಾಮೆ ಅಲ್ಲ ಬದಲಾಗಿ ರಾಜೀನಾಮೆಗೆ ಮುಂದಾಗಿರುವುದು ಸಚಿವ!
ಬೀದರ್[ಜು. 07] ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ರಹೀಮ್ ಖಾನ್ ರಾಜೀನಾಮೆ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಕೋಟಾದಲ್ಲಿ ನೀಡಿರುವ ಅನುದಾನ ನನ್ನ ಸಚಿವ ಸ್ಥಾನಕ್ಕೆ ಅವಮಾನ ಮಾಡಿದಂತಿದೆ ಎಂದು ಆರೋಪಿಸಿರುವ ಖಾನ್ ಸ್ಥಾನ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಬರೀ ವರ್ಷಕ್ಕೆ 6 ಕೋಟಿ ಅನುದಾನ ಮೀಸಲಿಡಲಾಗಿದೆ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಮ್ಮ ಸಮಾಜ ಕೂಡ ದೋಸ್ತಿ ಸರಕಾರದ ವಿರುದ್ಧ ಮುನಿಸಿಕೊಂಡಿದೆ. ಶಾಸಕ ರೋಷನ್ ಬೀಗ್ ಕೂಡ ನನ್ನ ಸಂಪರ್ಕ ಮಾಡಿದ್ದಾರೆ. ನಾನು ನಾಳೆ ಶಾಸಕ ಹಾಗೂ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದರು ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.
ಎರಡು ದಿನಗಳಲ್ಲಿ ನನ್ನ ನಿರ್ಧಾರ ಕೈಗೋಳುತ್ತೆನೆ. ಕ್ಷೇತ್ರದ ಅಭಿವೃದ್ಧಿಯೇ ನನಗೆ ಮುಖ್ಯ. ಅದರ ಮುಂದೆ ಉಳಿದ ಸ್ಥಾನಗಳೆಲ್ಲ ಗೌಣ ಎಂದಿದ್ದಾರೆ.