Asianet Suvarna News Asianet Suvarna News

ಬೆಂಗಳೂರಿಗೆ ಬಂದಿಳಿದ ಸಿಎಂ HDK ಮುಂದಿರುವ ಕೊನೆಯ 4 ಆಯ್ಕೆ

ಅಮೆರಿಕ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ರಾಜೀನಾಮೆ ಪರ್ವದ ಈ ಸಂದರ್ಭದಲ್ಲಿ ಕುಮಾರಸ್ವಾಮಿ ಮುಂದೆ ಏನು ಮಾಡುತ್ತಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿದೆ.

CM HD Kumaraswamy returns to Bengaluru to meet JDS leaders
Author
Bengaluru, First Published Jul 7, 2019, 8:20 PM IST

ಬೆಂಗಳೂರು[ಜು. 07] ಎಂಟು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಸಿಎಂ ಕುಮಾರಸ್ವಾಮಿ ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಹಾಗಾದರೆ ದೋಸ್ತಿ ಸರಕಾರ ಉಳಿಸಿಕೊಳ್ಳಲು ಸಿಎಂ ಯಾವೆಲ್ಲ ಕ್ರಮಕ್ಕೆ ಮುಂದಾಗಬಹುದು.

1. ಅತೃಪ್ತರಿಗೆ ಮಂತ್ರಿಗಿರಿ:  ದೋಸ್ತಿ ಪಕ್ಷ ಕಾಂಗ್ರೆಸ್ ನೊಂದಿಗೆ ಸಭೆ ನಡೆಸಿ ಅತೃಪ್ತರಿಗೆ ಮಂತ್ರಿಗಿರಿ ನೀಡಿ ಬಂಡಾಯ ಶಮನ ಮಾಡಿ ಸರಕಾರ ಉಳಿಸಿಕೊಳ್ಳುವ ತೀರ್ಮಾನ ಮಾಡಬಹುದು.

‘ರಾಜೀನಾಮೆ ಪರ್ವ ಸಿದ್ದರಾಮಯ್ಯ ಗೇಮ್ ಪ್ಲ್ಯಾನ್’

2. ಸರಕಾರ ವಿಸರ್ಜನೆ: ಸರಕಾರ ವಿಸರ್ಜನೆ ಮಾಡಲು ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಬಹುದು.

3. ಚುನಾವಣೆಗೆ ಹೋಗೋಣ: ಕಾಂಗ್ರೆಸ್ ಸಖ್ಯ ಕಡಿದುಕೊಂಡು ನೇರವಾಗಿ ಜನರ ಬಳಿಗೆ ಹೋಗೋಣ ಎಂದು ತಂದೆ ದೇವೇಗೌಡರ ಮಾತಿನಂತೆ ನಡೆದುಕೊಳ್ಳಬಹುದು.

4. ಉಳಿದ ಶಾಸಕರ ಮೇಲೆ ಹಿಡಿತ:  ಪಕ್ಷದಲ್ಲಿ ಉಳಿದುಕೊಂಡಿರುವ ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ಕಡೆ ತೆರಳದಂತೆ ನೋಡಿಕೊಳ್ಳಬಹುದು.

Follow Us:
Download App:
  • android
  • ios