Asianet Suvarna News Asianet Suvarna News

ದೆಹಲಿ ಬಿಜೆಪಿಯಿಂದ ಕೃಷ್ಣ ಭೈರೇಗೌಡರ ಬತ್ತಳಿಕೆ ಸೇರಿದ 'ದೋಸ್ತಿ' ಸುದ್ದಿ!

ರಾಜ್ಯದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರಕ್ಕೆ ಕೆಲವೇ ದಿನದಲ್ಲಿ ಉರುಳುತ್ತದೆ ಎಂದು ಬಿಜೆಪಿ ನಾಯಕರು ಭವಿಷ್ಯ ನುಡಿಯುತ್ತಲೇ ಬಂದಿದ್ದಾರೆ. ಇಲ್ಲ..ಇಲ್ಲ ಸರಕಾರ ಗುಂಡುಕಲ್ಲಿನಂತೆ ಇದೇ ಎಂದು ದೋಸ್ತಿ ನಾಯಕರು ಹೇಳಿಕೊಂಡೇ ತಿರುಗಾಡ್ತಾ ಇದ್ದಾರೆ. ಇದೆಲ್ಲದರ ನಡುವೆ ಗ್ರಾಮೀಣಾಭಿವೃದ್ಧಿ ಸಚಿವರು ಕೊಟ್ಟ ಹೇಳಿಕೆ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದರೆ ಅಚ್ಚರಿ ಇಲ್ಲ.. ಹಾಗಾದ್ರೆ ಕೃಷ್ಣ ಭೈರೇಗೌಡ್ರು ಏನ್ ಹೇಳಿದ್ರು?

Karnataka Minister Krishna Byre gowda on Operation Kamala
Author
Bengaluru, First Published Jun 1, 2019, 9:26 PM IST

ಕೋಲಾರ[ಜೂ. 01]  ದೆಹಲಿ ಮೂಲದಿಂದಲೇ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರಿಗೆ ಈ ಶಾಕಿಂಗ್ ಸುದ್ದಿ ಗೊತ್ತಾಗಿದೆಯಂತೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದು ಸಚಿವ ಸಂಪುಟವೂ ರಚನೆಯಾಗಿದೆ. ಇಂಥ ಸಂದರ್ಭದಲ್ಲಿ ಕೃಷ್ಣಭೈರೇಗೌಡರ ಬತ್ತಳಿಕೆ ಸೇರಿಕೊಂಡ ಆ ಹೊಸ ಸುದ್ದಿ ಯಾವುದು?

ಲೋಕ ಸಮರದಲ್ಲಿ ಸದಾನಂದ ಗೌಡರ ಜತೆ ಸೆಣೆಸಿ ಬೆಂಗಳೂರು ಉತ್ತರದಲ್ಲಿ 676982 ವೋಟು ಪಡೆದು 147518 ಮತಗಳ ಸೋಲು ಕಂಡಿದ್ದ ಸಚಿವ ಕೃಷ್ಣ ಭೈರೇಗೌಡ ಕೋಲಾರದಲ್ಲಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಚಾಲ್ತಿಯಲ್ಲಿರುವ  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ದೆಹಲಿಯ ಬಿಜೆಪಿ ವರಿಷ್ಠರಿಂದಲೇ ಸೂಚನೆ ಬಂದಿದೆ ಎಂದು ಬಾಂಬ್ ಸಿಡಿಸಿದ್ದಾರೆ.

ಬಿಎಸ್ ಯಡಿಯೂರಪ್ಪಗೆ ಕೈ ಶಾಸಕನ ಬಹಿರಂಗ ಸವಾಲು

ದೆಹಲಿ ಮೂಲಗಳಿಂದಲೇ ನನಗೆ ಮಾಹಿತಿ ಸಿಕ್ಕಿದೆ.  ಏನಾದರೂ ಮಾಡಿ‌ ಮೈತ್ರಿ ಸರ್ಕಾರವನ್ನ ಉರುಳಿಸಬೇಕು ಅನ್ನೋ ನಿರ್ಧಾರಕ್ಕೆ ಬಿಜೆಪಿಯವರು ಬಂದೇ  ಬಿಟ್ಟಿದ್ದಾರೆ  ಆದರೆ ಸರ್ಕಾರಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂಬ ವಿಶ್ವಾಸವನ್ನು ಹೊರಹಾಕಿದ್ದಾರೆ.

ಬಿಜೆಪಿಯವರು ಜನರ ದಿಕ್ಕು ತಪ್ಪಿಸುವುದರಲ್ಲಿ ನಿಸ್ಸೀಮರು. ಕಳೆದ 10 ತಿಂಗಳಿನಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇದು ಇಲ್ಲಿಗೆ ನಿಲ್ಲಲ್ಲ. ಮುಂದೆಯೂ ಹೇಳಿಕೆ ನೀಡುತ್ತಲೆ ಇರುತ್ತಾರೆ. ಆದರೆ ದೋಸ್ತಿ ಸರಕಾರಕ್ಕೆ ಮಾತ್ರ ಏನೂ ಆಗಲ್ಲ  ಎಂದು ಕರ್ನಾಟಕ ಬಿಜೆಪಿ ನಾಯಕರನ್ನು ಲೇವಡಿ ಮಾಡಿದ್ದಾರೆ.ಆಗಾಗ.. ಅಲ್ಲಲ್ಲಿ ದೋಸ್ತಿ ಸರಕಾರದಲ್ಲಿ ಅಪಸ್ವರದ ಮಾತುಗಳನ್ನು ಸಚಿವರೇ ಆಡುತ್ತಿದ್ದರೂ ಅಗ್ರ ಪಂಕ್ತಿಯ ನಾಯಕರು ಏನೂ ಆಗೇ ಇಲ್ಲ ಎಂದು ಓಡಾಡಿಕೊಂಡೇ ಇದ್ದಾರೆ. ಆಪರೇಶನ್ ಕಮಲ, ಆಪರೇಶನ್ ಹಸ್ತ.. ಕುದುರೆ ವ್ಯಾಪಾರ... ಆರೋಪ-ಪ್ರತ್ಯಾರೋಪ ಮೂರು ಕಡೆಯಿಂದ ಬರ್ತಾನೆ  ಇದೆ. ನಾವು ಅವನ್ನೆಲ್ಲ ನಿಮ್ಮ ಮುಂದೆ ಇಡ್ತಾನೆ ಬಂದಿದ್ದೇವೆ.

Follow Us:
Download App:
  • android
  • ios