ರಾಜೀನಾಮೆ ಕೊಟ್ಟರೂ ಬೆಂಗಳೂರಿನಲ್ಲೇ ಉಳಿದುಕೊಂಡ ಈ 4 ಶಾಸಕರು
ರಾಜೀನಾಮೆ ಕೊಟ್ಟವರು ಈಗ ಏನು ಮಾಡುತ್ತಿದ್ದಾರೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ಆನಂದ್ ಸಿಂಗ್ ಅವರನ್ನು ಸೇರಿ ರಾಜೀನಾಮೆ ಕೊಟ್ಟಿರುವ 14 ಜನ ಶಾಸಕರಲ್ಲಿ 10 ಜನ ಮುಂಬೈಗೆ ಹಾರಿದ್ದಾರೆ. ಇನ್ನು ಉಳಿದವರು ಬೆಂಗಳೂರಿನಲ್ಲಿಯೇ ಇದ್ದಾರೆ.
ಬೆಂಗಳೂರು[ಜು. 06] ರಾಜೀನಾಮೆ ನೀಡಿರುವ 14 ರಲ್ಲಿ 10 ಜನ ಶಾಸಕರು ಮುಂಬೈ ಹಾರಿದ್ದರೆ ಉಳಿದ ನಾಲ್ಕು ಜನ ಬೆಂಗಳೂರಿನಲ್ಲೇ ಇದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿಯೇ ಉಳಿದುಕೊಂಡಿರುವ ಆ ನಾಲ್ಕು ಶಾಸಕರು ಯಾರು?
ರಾಜೀನಾಮೆ ಕೊಟ್ಟು ಬೆಂಗಳೂರಿನಲ್ಲೇ ಉಳಿದುಕೊಂಡಿರುವ ಶಾಸಕರೊಂದಿಗೆ ಕಾಂಗ್ರೆಸ್ ನಾಯಕರು ಸಂಧಾನ ಮಾಡುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗಿಲ್ಲ.
ರಾಜೀನಾಮೆ ಕೊಟ್ಟು ಮುಂಬೈಗೆ ಹಾರಿದ ಶಾಸಕರ ಲಿಸ್ಟ್..ನಿಮ್ಮವರಿದ್ದಾರಾ?
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲೇ ಉಳಿದುಕೊಂಡವರು
1. ಮುನಿರತ್ನ - ರಾಜರಾಜೇಶ್ವರಿ ನಗರ ಶಾಸಕ[ಕಾಂಗ್ರೆಸ್]
2. ರಾಮಲಿಂಗಾ ರೆಡ್ಡಿ- ಬಿಟಿಎಂ ಲೇಔಟ್[ಕಾಂಗ್ರೆಸ್]
3. ಸೌಮ್ಯಾ ರೆಡ್ಡಿ- ಜಯನಗರ [ಕಾಂಗ್ರೆಸ್]
4. ಆನಂದ್ ಸಿಂಗ್-ವಿಜಯನಗರ, ಬಳ್ಳಾರಿ [ಕಾಂಗ್ರೆಸ್]