ಕೊಡಗು ಜನರ ಕಣ್ಣಲ್ಲಿ ಈ ವರ್ಷದ ಮಳೆ ನೀರು ತರಿಸುತ್ತಲೇಇದೆ. ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ ಜನ ಹೈರಾಣವಾಗಿದ್ದಾರೆ.
ಮಡಿಕೇರಿ[ಆ.17] ಕೊಡಗಿನ ಜನರ ನೋವಿಗೆ ಸ್ಪಂದಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದಾರೆ. ಕಷ್ಟದಲ್ಲಿರುವ ಕೊಡಗು ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಈ ಸಂದರ್ಭದಲ್ಲಿ ಅವರಿಗೆ ನಮ್ಮ ಸಹಾಯ ಹಾಗೂ ಬೆಂಬಲ ಅಗತ್ಯವಿದೆ ಎಂದು ದರ್ಶನ್ ವಿನಂತಿ ಮಾಡಿಕೊಂಡಿದ್ದಾರೆ.
ಕೊಡಗು ಪ್ರವಾಹ: ಸಂಕಷ್ಟದಲ್ಲಿರುವವರಿಗೆ ಹೆಲ್ಪ್ಲೈನ್
ನೋವಿನಲ್ಲಿ ಇರುವವರಿಗೆ ನಮ್ಮಿಂದ ಏನಾದರೂ ಅತಿ ದೊಡ್ಡ ಕೊಡುಗೆ ನೀಡುವುದಾದರೆ ನಾವು ಈ ಕೂಡಲೆ ಅವರ ನೆರವಿಗೆ ಧಾವಿಸಬೇಕು. ಸರಕಾರ ಕೂಡ ಸಕಲ ಪರಿಹಾರ ನೀಡಲು ಈ ಕೂಡಲೆ ಮುಂದೆ ಬರಬೇಕು ಎಂದು ಸುದೀಪ್ ವಿನಂತಿಸಿಕೊಂಡಿದ್ದಾರೆ.
