ಉಡುಪಿ ಕೃಷ್ಣ ಕೃಪೆಯಿಂದ ನಿರ್ದೋಷಿಯಾದರಾ ಕನಿಮೋಳಿ..?
2ಜಿ ಹಗರಣದಲ್ಲಿ ಆರೋಪ ಹೊತ್ತಿದ್ದ ಕನಿಮೋಳಿಗೆ ಇದೀಗ ಪ್ರಕರಣದಿಂದ ಮುಕ್ತಿ ಸಿಕ್ಕಿದೆ. ಅವರನ್ನು ಆರೋಪ ಮುಕ್ತ ಮಾಡಿ ಕಾಪಾಡುವಲ್ಲಿ ಒಬ್ಬರ ಪಾತ್ರ ಹೆಚ್ಚಿದೆಯಂತೆ, ಅವರ್ಯಾರು ಗೊತ್ತಾ..?
ಉಡುಪಿ (ಡಿ.24): 2ಜಿ ಹಗರಣದಲ್ಲಿ ಆರೋಪ ಹೊತ್ತಿದ್ದ ಕನಿಮೋಳಿಗೆ ಇದೀಗ ಪ್ರಕರಣದಿಂದ ಮುಕ್ತಿ ಸಿಕ್ಕಿದೆ. ಅವರನ್ನು ಆರೋಪ ಮುಕ್ತ ಮಾಡಿ ಕಾಪಾಡುವಲ್ಲಿ ಒಬ್ಬರ ಪಾತ್ರ ಹೆಚ್ಚಿದೆಯಂತೆ, ಅವರ್ಯಾರು ಗೊತ್ತಾ ಉಡುಪಿಯ ಶ್ರೀ ಕೃಷ್ಣ..! ಕನಕನಿಗೆ ಒಲಿದ ಶ್ರೀ ಕೃಷ್ಣ ಇದೀಗ ಕನಿಮೋಳಿಗೆ ಒಲಿದಿದ್ದಾನಂತೆ.
ಈ ಪ್ರಕರಣದ ಅಡಿಯುಲ್ಲಿ ಕನಿಮೋಳಿ ತಿಹಾರ್ ಜೈಲು ಸೇರಿದ್ದಾಗ, ಕನಿಮೋಳಿಯ ತಾಯಿ ರಜತಿ ಅಮ್ಮಾಳ್ ಕೃಷ್ಣ ದೇವರ ದರ್ಶನಕ್ಕೆ ಆಗಮಿಸಿದ್ದರು. 2011ರಲ್ಲಿ ದೇವರ ಸನ್ನಿಧಾನಕ್ಕೆ ಬಂದು ತಮ್ಮ ಕಷ್ಟವನ್ನು ಹೇಳಿಕೊಂಡು ಹಸರುವಂತೆ ಕೇಳಿಕೊಂಡಿದ್ದರು.
ಈ ವೇಳೆ ಇಲ್ಲಿನ ಶಿರೂರು ಸ್ವಾಮೀಜಿ ನಿಮ್ಮ ಮಗಳು 48 ದಿನಗಳಲ್ಲಿ ಬಿಡುಗಡೆಯಾಗುತ್ತಾರೆ ಎಂದು ಹೇಳಿದ್ದರಂತೆ. ಅದು ನಿಜವಾಗಿದ್ದು, ಇದೀಗ ಕನಿಮೋಳಿ ಖುಲಾಸೆಗೊಂಡಿದ್ದಾರೆ. ಹೊತ್ತ ಹರಕೆಯೂ ಕೂಡ ಈಡೇರಿದೆ.