ಬಂಧಿತರಲ್ಲಿ ಇನ್ಪೋಸಿಸ್ ಉದ್ಯೋಗಿ ಮೀರ್ನಾಯಿರ್ ಅಲಿ, ಪಿಯು ವಿದ್ಯಾರ್ಥಿ ಮೀರ್ ನಜೀರ್, ರಿಯಲ್ ಎಸ್ಟೆಟ್ ಉದ್ಯಮಿ ಶಾರ್ಪ್ ಶೂಟರ್ ರಪಿಕ್ ತಲೆಮರೆಸಿಕೊಂಡಿದ್ದು, ಬಂಧಿತರಿಂದ ೨ ವಾಹನ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಉಲ್ಲಾಸ್, ಉಪ ಅರಣ್ಯವಲಯಾಧಿಕಾರಿ ಸೂರಪ್ಪ ಇತರರು ಪಾಲ್ಗೊಂಡಿದ್ದರು.

ಚಿಕ್ಕಮಗಳೂರು(ಜ.02): ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾಡಿಗೆ ಅತಿಕ್ರಮ ಪ್ರವೇಶ ಮಾಡಿ ಎರಡು ಕಡವೆಗಳನ್ನ ಬೇಟೆಯಾಡಿದ ಆರೋಪದ ಮೇಲೆ ಓರ್ವ ಶಾರ್ಪ್ ಶೂಟರ್ ಸೇರಿದಂತೆ ೧೧ ಜನರನ್ನ ಬಂಧಿಸಲಾಗಿದೆ. ತರೀಕೆರೆ ತಾಲೂಕು ತಣಿಗೆಬೈಲು ಅರಣ್ಯ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಕೆಮ್ಮಣ್ಣಗುಂಡಿ ರಾಜ್ಮಹಲ್ ಮರ್ಗದ ನೆತ್ತಿಚೌಕದ ಬಳಿ ಶನಿವಾರ ರಾತ್ರಿ ೨ ಕಡವೆಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಧ್ಯರಾತ್ರಿ ಬೇಟೆಯಾಡಿದ ಮಾಹಿತಿಯನ್ನು ಸ್ಥಳೀಯರು ಅರಣ್ಯ ಇಲಾಖೆಗೆ ತಲುಪಿಸಿದ್ದಾರೆ.ತಕ್ಷಣ ಕಾರ್ಯಪ್ರೌವೃತ್ತರಾದ ಅರಣ್ಯ ಸಿಬ್ಬಂದಿ ಕೆಮ್ಮಣ್ಣಗುಂಡಿ ಅರಣ್ಯ ತನಿಖಾ ಠಾಣೆ ಬಳಿ ಕಾದು ಕುಳಿತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಧಿತರಲ್ಲಿ ಇನ್ಪೋಸಿಸ್ ಉದ್ಯೋಗಿ ಮೀರ್ನಾಯಿರ್ ಅಲಿ, ಪಿಯು ವಿದ್ಯಾರ್ಥಿ ಮೀರ್ ನಜೀರ್, ರಿಯಲ್ ಎಸ್ಟೆಟ್ ಉದ್ಯಮಿ ಶಾರ್ಪ್ ಶೂಟರ್ ರಪಿಕ್ ತಲೆಮರೆಸಿಕೊಂಡಿದ್ದು, ಬಂಧಿತರಿಂದ ೨ ವಾಹನ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಉಲ್ಲಾಸ್, ಉಪ ಅರಣ್ಯವಲಯಾಧಿಕಾರಿ ಸೂರಪ್ಪ ಇತರರು ಪಾಲ್ಗೊಂಡಿದ್ದರು.