Asianet Suvarna News Asianet Suvarna News

ಉಪ ಚುನಾವಣೆ ಸಮರ: ಕಾಂಗ್ರೆಸ್‌ಗೆ ಇರೋ ಆಸಕ್ತಿ ಜೆಡಿಎಸ್‌ಗಿಲ್ಲ ಯಾಕೆ?

ರಾಜ್ಯದ 3 ಲೋಕಸಭೆ ಹಾಗೂ 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್‌ ತೋರುತ್ತಿರುವ ಉತ್ಸಾಹ ಜೆಡಿಎಸ್‌ ಪಾಳಯದಲ್ಲಿ ಕಾಣಿಸುತ್ತಿಲ್ಲ. ಏಕೆ? ಏನಿದು? ಇಲ್ಲಿದೆ ಡಿಟೇಲ್ಸ್.

JDS still didn't appointes incharge leader for Karnataka byelections 2018
Author
Bengaluru, First Published Oct 22, 2018, 12:09 PM IST

ಬೆಂಗಳೂರು, [ಅ.22]: ರಾಜ್ಯದಲ್ಲಿ ಎದುರಾಗಿರುವ 3 ಲೋಕಸಭಾ ಹಾಗೂ 2 ವಿಧಾನಸಭಾ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಉಪಸಮರವನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.ಆದರೆ, ಕಾಂಗ್ರೆಸ್ ಮಿತ್ರ ಪಕ್ಷ ಜೆಡಿಎಸ್ ಅದ್ಯಾಕೋ ಮಂಕಾದಂತೆ ಕಾಣುತ್ತಿದೆ.

ಕಾಂಗ್ರೆಸ್ ತೋರುತ್ತಿರೋ ಉತ್ಸಾಹ ಜೆಡಿಎಸ್ ತೋರುತ್ತಿಲ್ಲ. ಯಾಕಂದ್ರೆ, 3 ಲೋಕಸಭಾ ಹಾಗೂ 2 ವಿಧಾನಸಭಾ ಉಪಚುನಾವಣೆಗೆ ಆಯಾ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಉಸ್ತುವಾರಿಗಳನ್ನು ನೇಮಿಸಿ ಪ್ರಚಾರ ನಡೆಸುವಂತೆ ಜವಾಬ್ದಾರಿ ನೀಡಿದೆ.

ತಂತ್ರ, ರಣತಂತ್ರ, ಜಾತಿಮಂತ್ರ: ಇದು ಉಪಚುನಾವಣೆಯ ಇಂಟರೆಸ್ಟಿಂಗ್ ಲೆಕ್ಕಾಚಾರ

ಜೆಡಿಎಸ್ ಅಭ್ಯರ್ಥಿ ಇದ್ದ ಕಡೆಗಳಲ್ಲೂ ಸಹ ಪ್ರಚಾರಕ್ಕೆ ಕಾಂಗ್ರೆಸ್ ಉಸ್ತುವಾರಿಗಳನ್ನ ನೇಮಿಸಲಾಗಿದೆ. ರಾಮನಗರದಲ್ಲಿ ಜೆಡಿಎಸ್ ಗೆ ಬೆಂಬಲಿಸುವಂತೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್‌ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಆದರೆ, ಜೆಡಿಎಸ್ ಮಾತ್ರ ಇನ್ನು ಯಾರೊಬ್ಬರನ್ನು ಉಸ್ತುವಾರಿಗಳನ್ನು ನೇಮಿಸದಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಂಡ್ಯ, ರಾಮನಗರ ಗೆಲುವು ಪಕ್ಕಾ ಆಗಿದ್ದರೂ ಉಸ್ತುವಾರಿ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಮುಂದಾಗಿಲ್ಲ. ಇನ್ನು  ಬಳ್ಳಾರಿ, ಜಮಖಂಡಿ ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿರುವ ಹಿನ್ನಲೆಯಲ್ಲಿ ಜೆಡಿಎಸ್ ಉಸ್ತುವಾರಿ ನೇಮಕ ಮಾಡಿಲ್ಲದಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ರಂಗೇರುತ್ತಿರುವ ಉಪಚುನಾವಣಾ ಕದನ: ಕ್ಷೇತ್ರಗಳ ಚಿತ್ರಣ ಇಲ್ಲಿದೆ

ಕೇವಲ ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡ ಮಾತ್ರ ಚುನಾವಣೆ ಪ್ರಚಾರ ನಡೆಸುತ್ತಿದ್ದು, ಉಸ್ತುವಾರಿ ನೇಮಿಸದೆ ಜೆಡಿಎಸ್ ಬೇಕೋ ಬಿಟ್ಟಿ ಚುನಾವಣೆ ಅಖಾಡಕ್ಕೀಳಿದಿದೆ ಎನ್ನುವುದು ಕೆಲ ಕಾಂಗ್ರೆಸ್ ಕಾರ್ಯಕರ್ತರ ಮಾತು.
 
ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ರಾಮನಗರಕ್ಕೆ ಸಂಸದ ಡಿ.ಕೆ.ಸುರೇಶ್‌ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. 

ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಅವರೊಂದಿಗೆ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರನ್ನು ಜಾತಿ ಮತ್ತು ಪ್ರಾದೇಶಿಕತೆಯ ಲೆಕ್ಕಾಚಾರದಲ್ಲಿ ನಿಯೋಜಿಸಲಾಗಿದ್ದು, ಎಲ್ಲರೂ ಚುನಾವಣೆ ಮುಗಿಯುವವರೆಗೂ ನೀಡಿದ ಜವಾಬ್ದಾರಿ ವಹಿಸಿರುವ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.

ಇದೇ ನವೆಂಬರ್ 3ರಂದು 3 ಲೋಕಸಭಾ ಹಾಗೂ 2 ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆಯಲಿದ್ದು, ನವೆಂಬರ್ 6ರಂದು ಮತ ಎಣಿಕೆಯಾಗಲಿದೆ.

Follow Us:
Download App:
  • android
  • ios