Asianet Suvarna News Asianet Suvarna News

ಪರಿಷತ್'ಗೆ ಜೆಡಿಎಸ್'ನಿಂದ ಇಬ್ಬರು, 11 ಮಂದಿ ಅವಿರೋಧ ಆಯ್ಕೆ ಖಚಿತ

ಜೂನ್.11 ರಂದು ನಡೆಯುವ ಚುನಾವಣೆಗೆ ಮೂರು ಪಕ್ಷಗಳಿಂದ 11 ಮಂದಿ ಕಣದಲ್ಲಿದ್ದು ಎಲ್ಲರೂ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.

JDS  Releases Two names for the MLC Elections.

ಬೆಂಗಳೂರು(ಮೇ.30): ದೇವೇಗೌಡರ ಪರಮಾಪ್ತರಾಗಿರುವ ವೈ.ಎಸ್.ವಿ. ದತ್ತಾಗೆ ಜೆಡಿಎಸ್'ನಿಂದ ಈ ಬಾರಿ ವಿಧಾನ ಪರಿಷತ್ ಸ್ಥಾನ ತಪ್ಪಿದೆ.  
ಮಂಗಳೂರಿನ ಉದ್ಯಮಿ ಬಿ.ಎಂ.ಫಾರೂಕ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಸುಬ್ರಹ್ಮಣ್ಯ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.ಜೂನ್.11 ರಂದು ನಡೆಯುವ ಚುನಾವಣೆಗೆ ಮೂರು ಪಕ್ಷಗಳಿಂದ 11 ಮಂದಿ ಕಣದಲ್ಲಿದ್ದು ಎಲ್ಲರೂ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ. ಅಂದು ಸಂಜೆ 5 ಗಂಟೆಗೆ ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.  
ಕಣದಲ್ಲಿರುವ ಮೂರು ಪಕ್ಷದ ಅಭ್ಯರ್ಥಿಗಳು
ಬಿಜೆಪಿ:  ರಘುನಾಥ್ ರಾವ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್. ರುದ್ರೇಗೌಡ, ಕೆ.ಪಿ.ನಂಜುಂಡಿ, ತೇಜಸ್ವಿನಿ ಗೌಡ
ಕಾಂಗ್ರೆಸ್:  ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್, ಅರವಿಂದ ಕುಮಾರ್ ಅರಳಿ, ಕೆ.ಹರೀಶ್ ಕುಮಾರ್
ಜೆಡಿಎಸ್: ಬಿ.ಎಂ.ಫಾರೂಕ್,ಡಾ.ಎಸ್.ಸುಬ್ರಹ್ಮಣ್ಯ 

Follow Us:
Download App:
  • android
  • ios