ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಗೆ ಲಘು ಹೃದಯಾಘಾತ!
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಗೆ ಲಘು ಹೃದಯಾಘಾತ| ಹೈದ್ರಾಬಾದ್ ನ ಓಜೋನ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹೈದರಾಬಾದ್[ಮಾ.16]: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ಗೆ ಹೃದಯಾಘಾತ ಸಂಭವಿಸಿದೆ. ಇವರನ್ನು ಹೈದ್ರಾಬಾದ್ ನ ಓಜೋನ್ ಆಸ್ಪತ್ರೆಯಲ್ಲಿ ವಿಶ್ವನಾಥ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ವಿಶ್ವನಾಥ್ ರನ್ನು ಕರೆತರಲು ಸಿದ್ಧತೆಯನ್ನೂ ನಡೆಸಲಾಗಿದೆ.
ನಿನ್ನೆ ಮಾ.16ರಂದು ಹೈದ್ರಾಬಾದ್ ನಲ್ಲಿ ಕುರುಬ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೆಶದಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ ಲಘು ಹೃದಯಾಘಾತ ಸಂಭವಿಸಿದೆ.