Asianet Suvarna News Asianet Suvarna News

ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್ ಮುಖಂಡ ವಿಶ್ವನಾಥ್ ಅಸಮಾಧಾನ

ಜೆಡಿಎಸ್ ಮುಖಂಡ ಎಚ್ ವಿಶ್ವನಾಥ್ ಸರ್ಕಾರ ಈ ನಿರ್ಧಾರಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬಜೆಟ್ ನಲ್ಲಿ  ತೈಲ ದರ ಏರಿಕೆ ಬಗ್ಗೆ ಮಾತನಾಡಿ ಇದರಿಂದ ಸಾಮಾನ್ಯ ಜನತೆ ಮೇಲೆ ಪರಿಣಾಮ ಉಂಟಾಗಲಿದೆ ಎಂದರು. 

JDS Leader H Vishwanath Unhappy Over Fuel Price Hike
Author
Bengaluru, First Published Jul 11, 2018, 9:10 AM IST

ಬೆಂಗಳೂರು :  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಏರಿಕೆ ಮಾಡುವ ನಿರ್ಧಾರವನ್ನು ವಾಪಸ್ ಪಡೆಯುವಂತೆ ಆಡಳಿತಾರೂಢ  ಜೆಡಿಎಸ್‌ನ ಹಿರಿಯ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಜೆಟ್‌ನಲ್ಲಿ ಸಿಹಿ ಮತ್ತು ಕಹಿ ಎರಡೂ ಇದೆ ಎಂದು ಮಾರ್ಮಿಕವಾಗಿ ಹೇಳಿದರು.

ಮುಖ್ಯಮಂತ್ರಿಗಳು ತಮ್ಮ ಬಜೆಟ್‌ನಲ್ಲಿ ತೈಲದ ಮೇಲಿನ ಕರಭಾರ ಹೆಚ್ಚಿಸುವ ತೀರ್ಮಾನ ಪ್ರಕಟಿಸಿದ್ದಾರೆ. ಆದರೆ, ಇದರಿಂದ ಶ್ರೀಸಾಮಾನ್ಯನ ಜನಜೀವನ ದುಸ್ತರವಾಗಲಿದೆ. ಆತನ ಮೇಲಿನ ಈ ಭಾರ ಕಡಮೆಗೊಳಿಸಬೇಕು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಕುಮಾರಸ್ವಾಮಿ ಚೊಚ್ಚಲ ಬಜೆಟ್‌ನಲ್ಲಿ ಹಲ ವಾರು ಉತ್ತಮ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮೆಟ್ರೋ ರೈಲು ವಿಸ್ತರಣೆ, 6 ಎಲಿವೇ ಟೆಡ್ ರಸ್ತೆಗಳ ನಿರ್ಮಾಣ, ಬಡಮಕ್ಕಳಿಗೆ ಅನುಕೂಲವಾಗಲಿರುವ ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್‌ಗೆ ಅನುದಾನ ಒದಗಿಸಿರುವುದು ಉತ್ತಮವಾದದ್ದು ಎಂದರು.

Follow Us:
Download App:
  • android
  • ios