ಮಾಜಿ ಸಿಎಂ, ಎಸ್​​ಎಂ ಕೃಷ್ಣ ಅಳಿಯ  ಸಿದ್ಧಾರ್ಥ್​​ ಮನೆ ಮತ್ತು ಕಂಪನಿಗಳ ಮೇಲೆ ಸತತ 4 ದಿನಗಳಿಂದ ನಡೆಯುತ್ತಿದ್ದ ಐಟಿ ಅಧಿಕಾರಿಗಳ ದಾಳಿ ಮುಕ್ತಾಯಗೊಂಡಿದೆ.  ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಐಟಿ ಅಧಿಕಾರಿಗಳಿಗೆ ಲಭ್ಯವಾಗಿವೆ.

ಬೆಂಗಳೂರು(ಸೆ.25): ಮಾಜಿ ಸಿಎಂ, ಎಸ್​​ಎಂ ಕೃಷ್ಣ ಅಳಿಯ ಸಿದ್ಧಾರ್ಥ್​​ ಮನೆ ಮತ್ತು ಕಂಪನಿಗಳ ಮೇಲೆ ಸತತ 4 ದಿನಗಳಿಂದ ನಡೆಯುತ್ತಿದ್ದ ಐಟಿ ಅಧಿಕಾರಿಗಳ ದಾಳಿ ಮುಕ್ತಾಯಗೊಂಡಿದೆ. ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಐಟಿ ಅಧಿಕಾರಿಗಳಿಗೆ ಲಭ್ಯವಾಗಿವೆ.

ಈ ಹಿಂದೆ ಸಿದ್ಧಾರ್ಥ್​​ 650 ಕೋಟಿ ಆಸ್ತಿಯನ್ನ ಘೋಷಿಸಿಕೊಂಡಿದ್ರು, ಆದ್ರೆ ಘೋಷಿಸಿಕೊಂಡಿದ್ದ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ದಾಖಲೆ ಪತ್ರಗಳನ್ನ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇನ್ನು ಸಿದ್ಧಾರ್ಥ್​ ಒಡೆತನದ ಕಾಫೀ ಡೇ ಸೇರಿದಂತೆ ಹಲವು ಕಂಪನಿಗಳು ನಿಯಮ ಮೀರಿ ಆಕ್ರಮ ಹಣ ವರ್ಗಾವಣೆ ಮಾಡಿರುವ ದಾಖಲೆಗಳು ಸಿಕ್ಕಿವೆ.

ಈ ಹಿನ್ನೆಲೆ ಆಕ್ರಮ ಆಸ್ತಿ ಕಾಯ್ದೆಯಡಿ ಸಿದ್ಧಾರ್ಥ್​​ಗೆ ಐಟಿ ಇಲಾಖೆ ನಾಳೆ ಸಮನ್ಸ್​ ನೀಡುವ ಸಾಧ್ಯತೆಯಿದ್ದು, ಜಾರಿ ನಿರ್ದೇಶನಲಾಯದ ಅಧಿಕಾರಿಗಳು ಕೂಡ ಸಿದ್ಧಾರ್ಥ್​ ವಿಚಾರಣೆಗೆ ಒಳಪಡಿಸುವ ಸಾದ್ಯತೆಯಿದೆ.