ಇಂದು ಬೆಳ್ಳಂಬೆಳಿಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪ್ರಸೂತಿ ತಜ್ಞೆ ಕಾಮಿನಿರಾವ್ ಮನೆ ಹಾಗೂ ಆಸ್ಪತ್ರೆಗಳ ಮೇಲೆ ಐಟಿ ದಾಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು (ನ.29): ಇಂದು ಬೆಳ್ಳಂಬೆಳಿಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪ್ರಸೂತಿ ತಜ್ಞೆ ಕಾಮಿನಿರಾವ್ ಮನೆ ಹಾಗೂ ಆಸ್ಪತ್ರೆಗಳ ಮೇಲೆ ಐಟಿ ದಾಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಿವಾನಂದ ಸರ್ಕಲ್​ನಲ್ಲಿರುವ ಕಾಮಿನಿರಾವ್ ಅವರ ಮಿಲನ್ ಆಸ್ಪತ್ರೆ, ಐವಿಎಫ್ ಡಯಾಗ್ನಿಸ್ಟಿಕ್ಸ್ , ಮೆಡಿಕಲ್ ಗೂಡ್ಸ್ ಡಿಸ್ಟ್ರೂಬ್ಯೂಷನ್ ಸೇರಿದಂತೆ ವಿವಿಧೆಡೆ ಐಟಿ ದಾಳಿ ನಡೆದಿದೆ. ಕಾಮಿನಿರಾವ್ ಮಗ ಹಾಗೂ ಸೊಸೆಯನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಸುವರ್ಣನ್ಯೂಸ್'ಗೆ ಐಟಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದಲ್ಲಿ 29 ಕಡೆ, ಚೆನ್ನೈನಲ್ಲಿರುವ 7 ಐವಿಎಫ್ ಡಯೋಗ್ನಾಸ್ಟಿಕ್ ಸೆಂಟರ್'ಗಳ ಮೇಲೆ ಐಟಿ ದಾಳಿ ನಡೆದಿದೆ. ಒಟ್ಟು 800 ಕೋಟಿ ರೂ ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.