ಜೆಡಿಎಸ್ ಮುಖಂಡ ವೀರೇಂದ್ರ ಸಹೋದರರ ಮನೆ ಮೇಲೂ ಐಟಿ ದಾಳಿ
ಚಿತ್ರ ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಜೆಡಿಎಸ್ ಮುಖಂಡನ ಮನೆ ಮೇಲೆ ಐಟಿ ದಾಳಿ ನಡೆಸಿದ ಬಳಿಕ ಕೆ.ಸಿ ನಾಗರಾಜ್ ಮತ್ತು ತಿಪ್ಪೇಸ್ಬಾಮಿ ನೇತೃತ್ವದ ತಂಡ ವೀರೇಂದ್ರ ಅಣ್ಣಂದಿರ ಮನೆಗಳ ಮೇಲೆಯೂ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.
ಚಿತ್ರದುರ್ಗ (ಡಿ.10): ಚಿತ್ರ ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಜೆಡಿಎಸ್ ಮುಖಂಡನ ಮನೆ ಮೇಲೆ ಐಟಿ ದಾಳಿ ನಡೆಸಿದ ಬಳಿಕ ಕೆ.ಸಿ ನಾಗರಾಜ್ ಮತ್ತು ತಿಪ್ಪೇಸ್ಬಾಮಿ ನೇತೃತ್ವದ ತಂಡ ವೀರೇಂದ್ರ ಅಣ್ಣಂದಿರ ಮನೆಗಳ ಮೇಲೆಯೂ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.
ನಿನ್ನೆ ಮಧ್ಯಾಹ್ನದಿಂದ ಇಲ್ಲಿಯವರೆಗೆ ಪರಿಶೀಲನಾ ಕಾರ್ಯ ಮುಂದುವರೆದಿದೆ. ಬ್ಯಾಂಕಿಗೆ ಮೂರು ಬಾರಿ ಹೋಗಿ ಬಂದಿರುವ ಅಧಿಕಾರಿಗಳು ಮನೆಯಲ್ಲಿ ಯಾವುದೇ ಹಣ ದೊರೆತಿಲ್ಲ ಎಂದು ಹೇಳಿದ್ದಾರೆ.
ಅದರೆ ಇದುವರೆಗೂ ಐಟಿ ಅಧಿಕಾರಿಗಳು ಯಾವುದೆ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ.
ಬಳ್ಳಾರಿ ರಸ್ತೆಯಲ್ಲಿರುವ ಮನೆಗಳು ಹಾಗೂ ಕಡತಗಳ ಬಗ್ಗೆ ಪರೀಶೀಲನೆ ನಡೆಸುತ್ತಿರುವ ವಿಜುವಲ್ಸ್ ಗಳನ್ನು ನಿನ್ನೆ ಡಿಲೀಟ್ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಉಡಾಫೆ ಉತ್ತರ ನೀಡಿದ್ದು ನಾವು ಮೀಡಿಯಾದವರು ಎಂದಾಗ ವಾಟ್ ಈಸ್ ಮೀಡಿಯಾ ಎಂದು ವ್ಯಂಗ್ಯವಾಡಿದ್ದಾರೆ.
ಐಟಿ ಅಧಿಕಾರಿಗಳು ಇಂದೂ ಕೂಡ ಶೋಧವನ್ನು ಮುಂದುವರೆಸಿದ್ದಾರೆ.