ಆತನೊಬ್ಬ ಸಾಮಾನ್ಯ ರೈತ. ತಾನಾಯ್ತು ತನ್ನ ಪಾಡಾಯ್ತು ಅಂತಾ ಇದ್ದವನು. ಆದರೆ ಹೆಸ್ಕಾಂ ಅಧಿಕಾರಿಗಳ ಲಂಚಬಾಕತನ ಆತನನ್ನು ಲೋಕಾಯುಕ್ತ ಠಾಣೆ ಮೆಟ್ಟಿಲೇರುವಂತೆ ಮಾಡಿತ್ತು. ಆದರೆ ಅದೇ ವಿಚಾರ ಆ ರೈತನ ಬದುಕಿಗೆ ಈಗ ಮುಳುವಾಗಿಬಿಟ್ಟಿದೆ. ಧಾರವಾಡ ತಾಲೂಕಿನ ಕುರಬಗಟ್ಟಿ ಗ್ರಾಮದ ವಿಠ್ಠಲ್ ವಕ್ಕುಂದ ತಾನಾಯಿತು ತನ್ನ ಕೃಷಿಯಾಯಿತು ಅಂತಾ ಜೀವನ ನಡೆಸುತ್ತಿದ್ದವರು. ಆದರೆ ಇವತ್ತು ಧಾರವಾಡದ ಹೆಸ್ಕಾಂ ಅಧಿಕಾರಿಗಳ ಸೇಡಿನ ವೃತ್ತಿಯಿಂದ ಈ ರೈತನ ಬದುಕು ಕತ್ತಲಾಗಿದೆ. ಈ ಹಿಂದೆ ತನ್ನ ಜಮೀನಿಗೆ ವಿದ್ಯುತ್ ಸಂಪರ್ಕಕ್ಕಾಗಿ ಹೆಸ್ಕಾಂ ಅಧಿಕಾರಿಗಳ ಬಳಿ ಅಂಗಲಾಚಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಲೇ ಇಲ್ಲ. ಬೇಸತ್ತ ವಿಠ್ಠಲ್ ವಕ್ಕುಂದ ಲೋಕಾಯುಕ್ತರ ಮೊರೆ ಹೋಗಿದ್ದ. ಆ ವೇಳೆ ಹೆಸ್ಕಾಂ ಅಧಿಕಾರಿ ಸಾಲಿಮಠ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದ.. ಈ ಘಟನೆಯನ್ನೇ ಹಿಡಿದುಕೊಂಡು ಹೆಸ್ಕಾಂ ಅಧಿಕಾರಿಗಳು, ರೈತ ವಿಠ್ಠಲ್ ವಕ್ಕುಂದರ ಸಮಸ್ಯೆಗೆ ಸ್ಪಂದಿಸದೇ ಸೇಡಿಗೆ ಮುಂದಾಗಿದ್ದಾರಂತೆ.
ಧಾರವಾಡ(ಅ.10): ಆತನೊಬ್ಬ ಸಾಮಾನ್ಯ ರೈತ. ತಾನಾಯ್ತು ತನ್ನ ಪಾಡಾಯ್ತು ಅಂತಾ ಇದ್ದವನು. ಆದರೆ ಹೆಸ್ಕಾಂ ಅಧಿಕಾರಿಗಳ ಲಂಚಬಾಕತನ ಆತನನ್ನು ಲೋಕಾಯುಕ್ತ ಠಾಣೆ ಮೆಟ್ಟಿಲೇರುವಂತೆ ಮಾಡಿತ್ತು. ಆದರೆ ಅದೇ ವಿಚಾರ ಆ ರೈತನ ಬದುಕಿಗೆ ಈಗ ಮುಳುವಾಗಿಬಿಟ್ಟಿದೆ. ಹೆಸ್ಕಾಂ ಅಧಿಕಾರಿಗಳ ಸೇಡಿನ ಕೆಲ್ಸ ಎಂತಹದ್ದು? ಇಲ್ಲಿದೆ ಡಿಟೇಲ್ಸ್
ಧಾರವಾಡ ತಾಲೂಕಿನ ಕುರಬಗಟ್ಟಿ ಗ್ರಾಮದ ವಿಠ್ಠಲ್ ವಕ್ಕುಂದ ತಾನಾಯಿತು ತನ್ನ ಕೃಷಿಯಾಯಿತು ಅಂತಾ ಜೀವನ ನಡೆಸುತ್ತಿದ್ದವರು. ಆದರೆ ಇವತ್ತು ಧಾರವಾಡದ ಹೆಸ್ಕಾಂ ಅಧಿಕಾರಿಗಳ ಸೇಡಿನ ವೃತ್ತಿಯಿಂದ ಈ ರೈತನ ಬದುಕು ಕತ್ತಲಾಗಿದೆ.
ಈ ಹಿಂದೆ ತನ್ನ ಜಮೀನಿಗೆ ವಿದ್ಯುತ್ ಸಂಪರ್ಕಕ್ಕಾಗಿ ಹೆಸ್ಕಾಂ ಅಧಿಕಾರಿಗಳ ಬಳಿ ಅಂಗಲಾಚಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಲೇ ಇಲ್ಲ. ಬೇಸತ್ತ ವಿಠ್ಠಲ್ ವಕ್ಕುಂದ ಲೋಕಾಯುಕ್ತರ ಮೊರೆ ಹೋಗಿದ್ದ. ಆ ವೇಳೆ ಹೆಸ್ಕಾಂ ಅಧಿಕಾರಿ ಸಾಲಿಮಠ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದ.. ಈ ಘಟನೆಯನ್ನೇ ಹಿಡಿದುಕೊಂಡು ಹೆಸ್ಕಾಂ ಅಧಿಕಾರಿಗಳು, ರೈತ ವಿಠ್ಠಲ್ ವಕ್ಕುಂದರ ಸಮಸ್ಯೆಗೆ ಸ್ಪಂದಿಸದೇ ಸೇಡಿಗೆ ಮುಂದಾಗಿದ್ದಾರಂತೆ.
ಸದ್ಯ ರೈತ ವಿಠ್ಠಲ್'ರವರ ಜಮೀನಿನ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದೆ. ಇನ್ನು ಮನೆಗೆ ಕಳೆದ ಮೂರು ತಿಂಗಳಿನಿಂದಲೂ ವಿದ್ಯುತ್ ಸಂಪರ್ಕ ಕೂಡ ತಪ್ಪಿ ಹೋಗಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ಹೇಳಿದ್ರೂ ಪ್ರಯೋಜನವಾಗಿಲ್ಲ. ಹೆಸ್ಕಾಂನ ಎ.ಇ.ಇ. ಮಂಜುನಾಥ ಟಿಂಗರಿಕರ್ ಅವರನ್ನು ಕೇಳಿದರೆ, ಸಮಸ್ಯೆ ಇದ್ದರೆ ಬಗೆಹರಿಸುತ್ತೇವೆ ಅಂತಾರೆ.
ಮನೆ ವಿದ್ಯುತ್ ಸಂಪರ್ಕ ಕಡಿತವಾಗಿ 3 ತಿಂಗಳಾಗಿದ್ದರೂ, ಪ್ರತಿ ತಿಂಗಳೂ ವಿದ್ಯುತ್ ಬಿಲ್ ನೀಡೋದನ್ನ ಅಧಿಕಾರಿಗಳು ಮಾತ್ರ ಮರೆತಿಲ್ಲ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನೀಡಿದ ಮನವಿಗೆ ಮಾತ್ರ ಯಾರೂ ಸ್ಪಂದಿಸುತ್ತಿಲ್ಲ.
