(ವಿಡಿಯೋ)ಸರ್ಕಾರಿ ಆಸ್ಪತ್ರೆಯಲ್ಲಿ ನರಕ ದರ್ಶನ: ಎಕ್ಸ್ರೇ ರೂಮಿಗೆ ವೃದ್ಧ ಪತಿಯನ್ನು ನೆಲದ ಮೇಲೆ ಎಳೆದೊಯ್ದ ಪತ್ನಿ
ಸ್ಟ್ರೆಚ್ಚರ್ ಇಲ್ಲದೇ ವೃದ್ಧ ರೋಗಿಯನ್ನು ಅಜ್ಜಿಯೊಬ್ಬಳು ನೆಲದಲ್ಲೇ ಎಳೆದುಕೊಂಡು ಹೋದ ಮನಕಲುಕುವ ಘಟನೆ ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಶಿವಮೊಗ್ಗ(ಜೂ.02): ಸ್ಟ್ರೆಚ್ಚರ್ ಇಲ್ಲದೇ ವೃದ್ಧ ರೋಗಿಯನ್ನು ಅಜ್ಜಿಯೊಬ್ಬಳು ನೆಲದಲ್ಲೇ ಎಳೆದುಕೊಂಡು ಹೋದ ಮನಕಲುಕುವ ಘಟನೆ ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು ಸ್ಟ್ರೆಚ್ಚರ್ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಮಾಜಿ ಸಿಎಂ ಯಡಿಯೂರಪ್ಪನವರ ತವರು ಜಿಲ್ಲೆಯಲ್ಲೇ ಇಂತದ್ದೊಂದು ಅಮಾನವೀಯ ಘಟನೆ ನಡೆದಿದೆ. ಕುರುಬರ ಪಾಳ್ಯದ ಅಮೀರ್ ಸಾಬ್ ಕಾಲಿಗೆ ಗಾಯಗೊಂಡಿದ್ದು ಚಿಕಿತ್ಸೆಗೆ ಅಂತ ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಸ್ಟ್ರೆಚ್ಚರ್ ಇಲ್ಲದೇ ಇದ್ದುದ್ದರಿಂದ ಪತ್ನಿಯೇ ತನ್ನ ಗಂಡನನ್ನು ಪಕ್ಕದ ವಾರ್ಡ್ಗೆ ಎಳೆದುಕೊಂಡು ಹೋಗಿದ್ದಾರೆ.
ಇಷ್ಟಾದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಸ್ಪಂದಿಸಿಲ್ಲ. ಈ ಮನಕಲುಕುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ.