ಕೆಲ ದಿನಗಳ ಹಿಂದಷ್ಟೇ ಕೇಂದ್ರ ಗೃಹಸಚಿವ ರಾಜ್'ನಾಥ್ ಸಿಂಗ್ 'ಪಾಕಿಸ್ತಾನ ಭಯೋತ್ಪಾದಕರನ್ನು ತಡೆಯುವಲ್ಲಿ ವಿಫಲವಾದರೆ, ಅದು ಹತ್ತು ಹೋಳಾಗಲಿದೆ' ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನದ ಗೃಹಮಂತ್ರಿ ನಿಸಾರ್ ಅಲಿ ಖಾನ್ 'ಇದು ಕೇವಲ ಸುಳ್ಳು ಭರವಸೆ, ಪಾಕಿಸ್ತಾನವನ್ನು ಹೋಳಾಗಿಸುವ ಬಿಜೆಪಿಯ ಕನಸು ಕೇವಲ ಅವರ ಭ್ರಮೆಯಷ್ಟೇ' ಅಲ್ಲದೆ 'ಭಾರತ ಬೇರೆ ರಾಷ್ಟ್ರಗಳಿಂದ ಅಲ್ಲ, ಬದಲಾಗಿ ತನ್ನದೇ ನೀತಿಯಿಂದ ವಿಭಾಜಿಸಲ್ಪಡುತ್ತಿದೆ. ಬೇಕಾದರೆ ಇನ್ನು ಕೆಲ ಸಮಯ ಕಾದು ನೋಡಿ ಭಾರತ ತನ್ನಿಂದಲೇ 20 ಹೋಳಾಗಲಿದೆ' ಎಂದೂ ಇದೇ ವೇಳೆ ಹೇಳಿರುವುದಾಗಿ 'ರೇಡಿಯೋ ಪಾಕಿಸ್ತಾನ್' ವರದಿ ಮಾಡಿದೆ.    

ಇಸ್ಲಮಾಬಾದ್(ಡಿ.13): ಒಂದಿಲ್ಲೊಂದು ಕಾರಣದಿಂದ ಭಾರತದ ವಿರುದ್ಧ ಕಿಡಿಕಾರುವ ಪಾಕಿಸ್ತಾನದ ಬುದ್ದಿ ಇನ್ನೂ ನೆಟ್ಟಗಾಗಿಲ್ಲ. ಇದೀಗ ಪಾಕಿಸ್ತಾನದ ಗೃಹಮಂತ್ರಿ ನಿಸಾರ್ ಅಲಿ ಖಾನ್ 'ಪಾಕಿಸ್ತಾನವನ್ನು ಹಲವು ಹೋಳುಗಳಾಗಿ ತುಂಡರಿಸುವ ಭಾರತದ ಕನಸು ಕೇವಲ ಎಂದು ಭ್ರಮೆಯಷ್ಟೇ' ಎಂದು ಗುಡುಗಿದ್ದಾರೆ. ಇಷ್ಟೇ ಅಲ್ಲದೆ ಭಾರತದ ವಿಚಾರವಾಗಿ ಇನ್ನೂ ಉದ್ಧಟತನದ ಹೇಳಿಕೆ ನೀಡಿದ್ದು, ಭಾರತೀಯರನ್ನು ಕೆರಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಗೃಹಸಚಿವ ರಾಜ್'ನಾಥ್ ಸಿಂಗ್ 'ಪಾಕಿಸ್ತಾನ ಭಯೋತ್ಪಾದಕರನ್ನು ತಡೆಯುವಲ್ಲಿ ವಿಫಲವಾದರೆ, ಅದು ಹತ್ತು ಹೋಳಾಗಲಿದೆ' ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನದ ಗೃಹಮಂತ್ರಿ ನಿಸಾರ್ ಅಲಿ ಖಾನ್ 'ಇದು ಕೇವಲ ಸುಳ್ಳು ಭರವಸೆ, ಪಾಕಿಸ್ತಾನವನ್ನು ಹೋಳಾಗಿಸುವ ಬಿಜೆಪಿಯ ಕನಸು ಕೇವಲ ಅವರ ಭ್ರಮೆಯಷ್ಟೇ' ಅಲ್ಲದೆ 'ಭಾರತ ಬೇರೆ ರಾಷ್ಟ್ರಗಳಿಂದ ಅಲ್ಲ, ಬದಲಾಗಿ ತನ್ನದೇ ನೀತಿಯಿಂದ ವಿಭಾಜಿಸಲ್ಪಡುತ್ತಿದೆ. ಬೇಕಾದರೆ ಇನ್ನು ಕೆಲ ಸಮಯ ಕಾದು ನೋಡಿ ಭಾರತ ತನ್ನಿಂದಲೇ 20 ಹೋಳಾಗಲಿದೆ' ಎಂದೂ ಇದೇ ವೇಳೆ ಹೇಳಿರುವುದಾಗಿ 'ರೇಡಿಯೋ ಪಾಕಿಸ್ತಾನ್' ವರದಿ ಮಾಡಿದೆ.

ಜಮ್ಮು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ 'ಶಹೀದ್ ದಿವಸ್' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ರಾಜ್'ನಾಥ್ ಸಿಂಗ್ 'ಭಾರತವನ್ನು ಧಾರ್ಮಿಕವಾಗಿ ವಿಭಾಜಿಸಿದ ಬಳಿಕವಷ್ಟೇ ಪಾಕಿಸ್ತಾನ ಅಸ್ಥಿತ್ವ ಪಡೆದುಕೊಂಡಿತ್ತು. ಆದರೆ ಅದು ತನ್ನ ಒಗ್ಗಟ್ಟನ್ನು ಕಾಪಾಡುವಲ್ಲಿ ವಿಫಲವಾಯಿತು. 1971ರಲ್ಲಿ ಪಾಕಿಸ್ತಾನ ಎರಡು ಹೋಳಾಗಿ(ಬಾಂಗ್ಲಾದೇಶ) ವಿಭಜಿತವಾಗಿದೆ. ಇನ್ನೂ ಪಾಠ ಕಲಿಯದೇ ಹೋದರೆ 10 ಭಾಗವಾಗಿ ವಿಭಜಿತವಾಗಲಿದೆ. ಆದರೆ ಇದಕ್ಕೆ ಭಾರತ ಕಾರಣವಾಗುವುದಿಲ್ಲ' ಎಂದಿದ್ದರು.