Asianet Suvarna News Asianet Suvarna News

ರಕ್ತಕ್ಕೆ ರಕ್ತ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಅಂತಿದೆ ಭಾರತ..!

ಉಗ್ರರ ಹೀನ ಕೃತ್ಯಕ್ಕೆ ಪ್ರತೀಕಾರವಾಗಲೇಬೇಕು. ರಕ್ತಕ್ಕೆ ರಕ್ತ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಅಂತಿದೆ ಭಾರತ..!

India Wants Bitter Reply For Kashmir Attack
Author
Bengaluru, First Published Feb 14, 2019, 10:28 PM IST

ನವದೆಹಲಿ, [ಫೆ.14]: ಫುಲ್ವಾಮಾದಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಇದ್ದ ವಾಹನದ ಮೇಲೆ ಉಗ್ರರು ಗುರುವಾರ ನಡೆಸಿರುವ ದಾಳಿಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. 

ಈ ದಾಳಿಗೆ ಇಡೀ ವಿಶ್ವವೇ ಖಂಡನೆ ವ್ಯಕ್ತಪಡಿಸಿದ್ದು, ಕೆಲ ರಾಷ್ಟ್ರಗಳು ಭಾರತಕ್ಕೆ ಬೆನ್ನೆಲುಬಾಗಿ ನಿಲ್ಲುವ ಮಾತುಗಳನ್ನಾಡುತ್ತಿವೆ. ಮತ್ತೊಂದೆಡೆ ಉಗ್ರರ ಹಟ್ಟಹಾಸಕ್ಕೆ ಇಡೀ ಭಾರತವೇ ರೊಚ್ಚಿಗೆದ್ದಿದ್ದು, ರಕ್ತಕ್ಕೆ ರಕ್ತ, ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ, ಅಂತಿದೆ.

India Wants Bitter Reply For Kashmir Attack

ಭಾರತದ ಬೆಂಬಲಕ್ಕೆ ಬಂತು ಜಗತ್ತು: ಪಾಕ್‌ಗೆ ಕಾದಿದೆ ಆಪತ್ತು!

ಉಗ್ರ ಸಂಘಟನೆ ಕೃತ್ಯಕ್ಕೆ ಬೆಂಬಲಿಸುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲೇಬೇಕು, ಇನ್ನೊಂದು ಬಾರಿ ಸರ್ಜಿಕಲ್ ಸ್ಟ್ರೖಕ್ ಆಗಲೇ ಬೇಕು ಎನ್ನುವುದು ಭಾರತದ ಒಕ್ಕೊರಲಿನ ಕೂಗು. 

ಭಾರತದ ಪ್ರತೀಕಾರಕ್ಕೆ ಬೆದರಿದ ಪಾಕ್, ಭದ್ರತಾ ಸಂಸ್ಥೆಗಳೊಂದಿಗೆ ಟಾಕ್..!

India Wants Bitter Reply For Kashmir Attack

ಉಗ್ರರಿಗೆ ಪ್ರೋತ್ಸಾಹಿಸುವ ಪಾಕ್ ಧ್ವಜವನ್ನು ಸುಟ್ಟು ಸೇಡಿಗೆ ಸೇಡು ಆಗಲೇಬೇಕೆಂಬ ಘೋಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಜ್ಯದಲ್ಲೂ ಭುಗಿಲೆದ್ದ ಆಕ್ರೋಶ
ಇತ್ತ ಕರ್ನಾಟಕದಲ್ಲೂ ಉಗ್ರರ ದಾಳಿ ಖಂಡಿಸಿ ಪ್ರತಿಭಟನೆಗಳು ನಡೆದಿವೆ. ಧಾರವಾಡ ಮತ್ತು ಕಾರವಾರಗಳಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ರಾತ್ರಿ ಉಗ್ರರ ಕೃತ್ಯ ಖಂಡಿಸಿ ಪ್ರತಿಭಟಿಸಿದವು.

India Wants Bitter Reply For Kashmir Attack

ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪಾಕಿಸ್ತಾನದ ಧ್ವಜವನ್ನು ದಹಿಸಿ, ತುಳಿದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಯುದ್ಧದ ಮೂಲಕ ದುಷ್ಟ ಪಾಕ್​ಗೆ ಪಾಠ ಕಲಿಸುವಂತೆ ಆಗ್ರಹಿಸಿದರು.

Follow Us:
Download App:
  • android
  • ios