Asianet Suvarna News Asianet Suvarna News

IMA ಬಹುಕೋಟಿ ವಂಚನೆ ಪ್ರಕರಣ ಸಿಸಿಬಿ ಹೆಗಲಿಗೆ

IMA ಬಹುಕೋಟಿ ವಂಚನೆ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣವನ್ನು ಸಿಸಿಬಿಗೆ ವಹಿಸಿದೆ.

IMA Fraud Case Karnataka Govt Transfers to CCB for Probe
Author
Bengaluru, First Published Jun 11, 2019, 3:13 PM IST

ಬೆಂಗಳೂರು, (ಜೂನ್,11): ಬೆಂಗಳೂರಿನ ಶಿವಾಜಿನಗರದ ಪ್ರತಿಷ್ಠಿತ ಐಎಂಎ ವಂಚನೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದನ್ನು ಸಿಎಂ ಕುಮಾರಸ್ವಾಮಿ ಅವರು ಸಿಸಿಬಿಗೆ ವಹಿಸಿದ್ದಾರೆ.

"

ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟ್ವಿಟ್ಟರ್‌ನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

‘ಆತ್ಮಹತ್ಯೆ’ ಮಾಡಿಕೊಂಡ್ರೂ ₹17 ಕೋಟಿ ಟ್ರಾನ್ಸ್‌ಫರ್ ಮಾಡಿಕೊಂಡ ಮನ್ಸೂರ್!

ಐಎಂಎ ಜ್ಯುವೆಲರಿ ಅಂಗಡಿ ಮಾಲೀಕ ಮಹಮ್ಮದ್​ ಮನ್ಸೂರ್​ ಖಾನ್​ ಸಾವಿರಾರು ಜನಕ್ಕೆ ಸಾವಿರಾರೂ ಕೋಟಿ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ವಂಚನೆಗೊಳದ ಜನರು, ಮಾಲೀಕ ಮನ್ಸೂರ್​ ಖಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾರೆ.  

ಬಹುಕೋಟಿ ವಂಚನೆಯ  ಐಎಮ್ ಎ ಮೋಸದ ಜಾಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ದಾವಣಗೆರೆಯಲ್ಲಿಯೂ ಜನರು ಅಪಾರ ಹಣ ಕಳೆದುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಬಿಡುಗಡೆ ಮಾಡಿ ನಾಪತ್ತೆಯಾಗಿರುವ ಮಹಮ್ಮದ್​ ಮನ್ಸೂರ್​ ಖಾನ್ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ.

Follow Us:
Download App:
  • android
  • ios