Asianet Suvarna News Asianet Suvarna News

ರಾಯಚೂರಿಗೆ 'ರೋಹಿಣಿ' ನಕ್ಷತ್ರ: ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಚಿತ್ರ

ದಕ್ಷ, ಜನಮೆಚ್ಚಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು 'ಎಡದೊರೆ ನಾಡು ಭತ್ತದ ಬಿಡು’ ರಾಯಚೂರಿಗೆ ವರ್ಗಾವಣೆಯಾಗಿದ್ದಾರಾ..? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಹಾಗಾದ್ರೆ ಇದರ ಸತ್ಯಾಸತ್ಯತೆ ಏನು..? 

IAS officer Rohini Sindhuri seems to be transferred to Raichur viral in social media
Author
Bengaluru, First Published May 16, 2019, 9:55 PM IST

ಬೆಂಗಳೂರು, [ಮೇ.16]:  'ರೋಹಿಣಿ ಸಿಂಧೂರಿ ಮೇಡಂ Welcome To Raichur’ ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. 

ಪ್ರಸ್ತುತ ರೋಹಿಣಿ ಸಿಂಧೂರಿ ಅವರು ಬೆಂಗಳೂರಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಲ್ಲ.   

ಖಡಕ್ ಡಿಸಿ, ಜನ ಮೆಚ್ಚಿದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ

ಆದ್ರೆ, ಇದ್ದಕ್ಕಿದ್ದಂತೆ ಇಂದು [ಗುರುವಾರ] ರೋಹಿಣಿ ಸಿಂಧೂರಿ ಮೇಡಂ 'ರೋಹಿಣಿ ಸಿಂಧೂರಿ ಮೇಡಂ Welcome To Raichur’ ಎಂದು ಫೇಸ್ ಬುಕ್ ನಲ್ಲಿ ಫುಲ್ ವೈರಲ್ ಆಗುತ್ತಿದೆ.

2017 ಜುಲೈ14 ರಿಂದ ಹಾಸನ ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದ ರೋಹಿಣಿ ಸಿಂಧೂರಿ ಅವರನ್ನು 2019. ಫೆಬ್ರವರಿ 22ರಂದು ರಾಜ್ಯ ಸರ್ಕಾರ, ಬೆಂಗಳೂರಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದಶಿಯಾನ್ನಾಗಿ ವರ್ಗಾವಣೆ ಮಾಡಿತ್ತು.

Follow Us:
Download App:
  • android
  • ios