ಲೈಂಗಿಕ ಹಗರಣ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಶಹಜಹಾನ್ ಯುವತಿಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಗ ಬಿಡುಗಡೆಯಾಗಿ 5 ದಿನಗಳಾದರೂ ವಿಶ್ವವಿದ್ಯಾಲಯ ಪ್ರಕರಣದ ಬಗ್ಗೆ ತುಟಿ ಬಿಚ್ಚಿರಲಿಲ್ಲ.

ಹಾವೇರಿ (ಜ.17): ಜಾನಪದ ವಿವಿಯ ಸಹಾಯಕ ಕುಲಸಚಿವ ಶಹಜಹಾನ್ ಮುದಕವಿಯ ಲೈಂಗಿಕ ಹಗರಣದ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ ಆದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೊಂದೆಡೆ ಶಹಜಹಾನ್ ಪರ ಹಾಗೂ ವಿರುದ್ಧ ಪ್ರತಿಭಟನೆ ಜೋರಾಗಿದೆ. ಶಹಜಹಾನ್ ಬಳಿ ಸ್ಪಷ್ಟೀಕರಣ ಕೇಳಲು ವಿಶ್ವವಿದ್ಯಾಲಯ ಸಿದ್ದತೆ ನಡೆಸಿದ್ದು, ಈ ಪ್ರಕರಣ ಶಹಜಹಾನ್ ಕೆಲಸಕ್ಕೆ ಕುತ್ತು ತರುವುದೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಲೈಂಗಿಕ ಹಗರಣ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಶಹಜಹಾನ್ ಯುವತಿಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಗ ಬಿಡುಗಡೆಯಾಗಿ 5 ದಿನಗಳಾದರೂ ವಿಶ್ವವಿದ್ಯಾಲಯ ಪ್ರಕರಣದ ಬಗ್ಗೆ ತುಟಿ ಬಿಚ್ಚಿರಲಿಲ್ಲ.

ಈಗ ಸರ್ಕಾರವೇ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ವಿಶ್ವವಿದ್ಯಾಲಯಕ್ಕೆ ಕೇಳಿದೆ. ಇನ್ನೊಂದೆಡೆ ಶಹಜಹಾನನನ್ನು ವಜಾಗೊಳಿಸುವಂತೆ ಎಬಿವಿಪಿ ಇಂದು ವಿವಿ ಎದುರು ಪ್ರತಿಭಟನೆ ನಡೆಸಿತು.