Asianet Suvarna News Asianet Suvarna News

ಪ್ರಧಾನಿ ಮೊದಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇದೀಗ ಶುಭ ಸುದ್ದಿಯೊಂದನ್ನು ನೀಡುತ್ತಿದೆ. ಸಂಘಟನಾ ವಲಯದ ಕಾರ್ಮಿಕರ ಪಿಂಚಣಿ  ಮೊತ್ತವನ್ನು ದ್ವಿಗುಣ ಪ್ರಮಾಣದಲ್ಲಿ ಏರಿಕೆ ಮಾಡಲು ಚಿಂತನೆ ನಡೆಸಿದೆ. 

Good news for organized sector employees

ನವದೆಹಲಿ :  ಸಂಘಟನಾ ವಲಯದ ಕಾರ್ಮಿಕರಿಗೆ  ಇಲ್ಲಿದೆ ಒಂದು ಶುಭ ಸುದ್ದಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಈ ನೌಕರರ ಕನಿಷ್ಟ ಪಿಂಚಣಿಯ ಮೊತ್ತವನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ. ಅಲ್ಲದೇ ಪಿಂಚಣಿಯನ್ನು ದ್ವಿಗುಣ ಪ್ರಮಾಣದಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ. 

ಎಲ್ಲಾ ಸಂಘಟನಾ ವಲಯದ ನೌಕರರಿಗೂ ಕೂಡ ಈ ವಿಚಾರ ಅನ್ವಯವಾಗಲಿದ್ದು ,  ಒಂದು ವೇಳೆ ಜಾರಿಯಾದಲ್ಲಿ ಲಕ್ಷಾಂತರ ನೌಕರರು ಇದರ ಉಪಯೋಗವನ್ನು ಪಡೆದುಕೊಳ್ಳಲಿದ್ದಾರೆ. 

ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ಕಾರ್ಮಿಕ ಸಚಿವಾಲಯದಿಂದ ರಚಿಸಲಾಗಿದ್ದು, ಈ ಸಮಿತಿಯು ಸಂಘಟನಾ ವಲಯದ ಕಾರ್ಮಿಕರು ತಿಂಗಳಿಗೆ ಪಡೆಯುತ್ತಿರುವ ಪಿಂಚಣಿ ಮೊತ್ತ 1 ಸಾವಿರ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಪಿಂಚಣಿ ಮೊತ್ತವನ್ನು ಏರಿಕೆ ಮಾಡುವುದು ಅತ್ಯಗತ್ಯ ಎಂದು ಹೇಳಿದೆ. 

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಘಟನಾ ವಲಯದ ನೌಕರರ ಪಿಂಚಣಿ ಮೊತ್ತವನ್ನು 2000ರು.ವರೆಗೂ ಕೂಡ ಏರಿಕೆ ಮಾಡುವ ಸಾಧ್ಯತೆ ಇದೆ. ಅಲ್ಲದೇ ಭವಿಷ್ಯದಲ್ಲಿ ಈ ಮೊತ್ತವು 5000 ವರೆಗೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯುತವಾಗಿದ್ದು,  ಇದರಿಂದ ಬಡ  ಸಂಘಟನಾ ವಲಯದ ಕೆಲಸಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭವುಂಟಾಗಲಿದೆ ಎಂದು ಸಮಿತಿಯ ಸದಸಸ್ಯರೋರ್ವರು  ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

Follow Us:
Download App:
  • android
  • ios