ಗುಡ್ ಮಾರ್ನಿಂಗ್ ಕರ್ನಾಟಕ: ಪ್ರಮುಖ ಸುದ್ದಿಗಳು
1. 2020ಕ್ಕೆ ಭಾರತದಲ್ಲಿ 5G ಹವಾ:
ನವದೆಹಲಿ: 2020ರ ವೇಳೆಗೆ ಭಾರತದಲ್ಲಿ ಸಿಗಲಿದೆ 5ಜಿ ಸೇವೆ - ದೇಶದಲ್ಲಿ ಹೈಸ್ಪೀಡ್ ಡೇಟಾ ಸೇವೆ ಒದಗಿಸಲು ಕೇಂದ್ರ ಸರಕಾರ ಪ್ಲಾನ್ - 5ಜಿ ತಂತ್ರಜ್ಞಾನದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 500 ಕೋಟಿ ಮೀಸಲು - ಉನ್ನತ ಮಟ್ಟದ ಸಮಿತಿ ರಚನೆ ಬಗ್ಗೆ ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಮಾಹಿತಿ
2. ದಾಳಿಗೆ ಉಗ್ರರ ಸಂಚು?
ನವದೆಹಲಿ: ನವರಾತ್ರಿ ಉತ್ಸವ ವೇಳೆ ದಾಳಿ ನಡೆಸಲು ಉಗ್ರರ ಪ್ಲಾನ್ - ಈಶಾನ್ಯ ಭಾರತದ ರಾಜ್ಯಗಳನ್ನು ಗುರಿಯಾಗಿಟ್ಟುಕೊಂಡು ದಾಳಿಗೆ ಸ್ಕೆಚ್ - ಗುಪ್ತಚರ ಇಲಾಖೆಯಿಂದ ಮಾಹಿತಿ - ದೆಹಲಿ, ಮುಂಬೈ, ಗುಜರಾತ್, ಉತ್ತರಪ್ರದೇಶದಲ್ಲಿ ಹೈಅಲರ್ಟ್
3. ಸುವರ್ಣನ್ಯೂಸ್ ಇಂಪ್ಯಾಕ್ಟ್:
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿಅನಿಷ್ಟ ಪದ್ಧತಿ ಜೀವಂತ - ಸುವರ್ಣನ್ಯೂಸ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು - ಗ್ರಾಮಕ್ಕೆ ದೌಡಾಯಿಸಿ ಜನರ ಮನವೋಲಿಕೆ ಯತ್ನ - ಮುಟ್ಟಾದಾಗ ಗ್ರಾಮದಿಂದ ಮಹಿಳೆಯರು ಹೊರಗುಳಿವ ಬಗ್ಗೆ ನಿನ್ನೆ ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು
4. ದೊರೆಗೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ:
ಬೆಂಗಳೂರು: ಕರ್ನಾಟಕ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿಗೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಆಯ್ಕೆ- ರಾಜ್ಯ ಸರ್ಕಾರದಿಂದ ನೀಡಲ್ಪಡುವ ಪ್ರಶಸ್ತಿ - ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ನಡೆಯಲಿದೆ ಪ್ರಶಸ್ತಿ ಪ್ರದಾನ
5. ಪುನೀತ ಯಾತ್ರೆಗೆ ಇಂದು ಚಾಲನೆ:
ಬೆಂಗಳೂರು: ಹಿರಿಯ ನಾಗರಿಕರಿಗೆ ಕಡಿಮೆ ವೆಚ್ಚದಲ್ಲಿ ಪುಣ್ಯಕ್ಷೇತ್ರಗಳ ದರ್ಶನ - ಪುನೀತ ಯಾತ್ರೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ - 55 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಪ್ರವಾಸ
6. ಇಂದು ಮತ್ತೆ ಮಾತುಕತೆ:
ಬೆಂಗಳೂರು: ಸಿಎಂ ಗೃಹ ಕಚೇರಿಯಲ್ಲಿ ಕೃಷ್ಣಾದಲ್ಲಿ ಶಿಕ್ಷಕರ ಸಮಸ್ಯೆ ಪರಿಹಾರದ ಸಮಾಲೋಚನೆ - ಇಂದು ಸಿಎಂ ಜೊತೆ ಎರಡನೇ ಸುತ್ತಿನ ಮಾತುಕತೆ - ರಚನಾತ್ಮಕ ಪರಿಹಾರಕ್ಕೆ ಒತ್ತಾಯಿಸಲಿರುವ ಪದವಿಧರರ ಕ್ಷೇತ್ರದ ಶಾಸಕರು
7. ಪುಂಡರ ಅಟ್ಟಹಾಸಕ್ಕೆ ಬ್ರೇಕ್ ಯಾವಾಗ?
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಬೀದಿ ಕಾಮಣ್ಣರ ಕಾಟ - ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರ ಬಂಧನ - ಲೈಂಗಿಕ ದೌರ್ಜನ್ಯ ಎಸಗುವ ಕಿಡಿಗೇಡಿಗಳಿಗೆ ಪೊಲೀಸರ ಎಚ್ಚರಿಕೆ
8. ದಸರೆಗೆ ಏರ್ ಶೋ ರಂಗು:
ಮೈಸೂರು: ಮೈಸೂರು ದಸರಾದಲ್ಲಿ ಏರ್ ಶೋ ನಡೆಸಲು ರಕ್ಷಣಾ ಇಲಾಖೆ ಸಮ್ಮತಿ - ಟ್ವಿಟರ್ನಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ - ಸೆಪ್ಟೆಂಬರ್ 29ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆಯಾಗಲಿದೆ ಏರ್ ಶೋ
9.ಟ್ರಾಕ್ಟರ್ ಹರಿದು ಚಾಲಕ ಸಾವು:
ಬೆಂಗಳೂರು: ಟ್ರಾಕ್ಟರ್ ನಿಯಂತ್ರಣಕ್ಕೆ ಸಿಗದೆ ಇದ್ದಾಗ ಕೆಳಕ್ಕೆ ಜಂಪ್ ಮಾಡಿದ್ದ ಚಾಲಕ -ಈ ವೇಳೆ ಟ್ರಾಕ್ಟರ್ ನ ಹಿಂಬದಿ ಚಕ್ರ ಚಾಲಕನ ತಲೆ ಮೇಲೆ ಹರಿದು ಸಾವು - ಬೆಂಗಳೂರಿನ ಕುರಬರಹಳ್ಳಿಯಲ್ಲಿ ದುರ್ಘಟನೆ
10. 75 ಸಾವಿರ ಕದ್ದ ಚೋರರು:
ಬೆಂಗಳೂರು: 60 ರೂಪಾಯಿ ಆಸೆ ತೋರಿಸಿ ಚಾಲಕನ ಗಮನ ಬೇರೆಡೆ ಸೆಳೆದು 75 ಸಾವಿರ ಕಳ್ಳತನ - ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಘಟನೆ - ಕಾರಿನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ ಕಳ್ಳರ ಕೃತ್ಯ
11. ತಾತಪ್ಪನ ಕೈಚಳಕ:
ಬೆಂಗಳೂರು: ಮೊದಲ ದಿನ ಬಂದು ಕೈಲಾದಷ್ಟು ದೋಚಿ ಹೋದ - ಬಿಟ್ಟು ಹೋದ ಸಿಪಿಯು ಕದಿಯಲು ಮಾರನೇ ದಿನ ಬಂದ - ಮಲ್ಲೇಶ್ವರಂ ಕಳ್ಳ ತಾತಪ್ಪನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
12. ಕೊಲೆಗಾರ ಗಂಡ ಅರೆಸ್ಟ್:
ವಿಜಯಪುರ: ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಲೆಗೈದಿದ್ದ ಗಂಡ - ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಘಟನೆ - ತಲೆಮರೆಸಿಕೊಂಡಿದ್ದ ಆರೋಪಿ ಪತಿ ಅರೆಸ್ಟ್
13. ಬೈಕ್ ಕಳ್ಳರು ಅರೆಸ್ಟ್:
ಬೆಂಗಳೂರು: ಕೋರಮಂಗಲ ಪೊಲೀಸರ ಕಾರ್ಯಾಚರಣೆ - ಬೈಕ್ ಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರ ಬಂಧನ - ಬಂಧಿತರಿಂದ 7 ಲಕ್ಷ ಮೌಲ್ಯದ 13 ಬೈಕ್ ಜಪ್ತಿ
14. ಅಪ್ರಾಪ್ತರಿಗೆ ಬೈಕ್ ಕೊಟ್ಟರೆ ಪೋಷಕರಿಗೆ ದಂಡ!
ಬೆಂಗಳೂರು: ಅಪ್ರಾಪ್ತರು ಬೈಕ್ ರೈಡ್ ಮಾಡಿದ್ರೆ ಪೋಷಕರಿಗೆ ದಂಡ, ಡಿಎಲ್ ಕ್ಯಾನ್ಸಲ್ - 650 ಕ್ಕೂ ಹೆಚ್ಚು ಅಪ್ರಾಪ್ತರ ವಿರುದ್ಧ ಕೇಸ್ - ಪೋಷಕರೇ, ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡೋ ಮುನ್ನ ಎಚ್ಚರ
15. ಯೋಗೀಶ್ವರ್ ಬಿಜೆಪಿ ಸೇರಲ್ಲ:ಡಿಕೆಶಿ
ರಾಮನಗರ: ಚನ್ನಪಟ್ಟಣ ಶಾಸಕ ಯೋಗೇಶ್ವರ್ ಬಿಜೆಪಿ ಸೇರ್ಪಡೆ ವಿಚಾರ - ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಲ್ಲ - ಬಿಜೆಪಿ ಸೇರ್ತಾರೆ ಅನ್ನೋದು ಊಹಾಪೋಹಾ ಅಷ್ಟೇ ಎಂದ ಡಿಕೆಶಿ
16. 'ನಾಯಿ ಹಿಡೀರಿ ಸಾರ್'
ವಿಜಯಪುರ: ವಿಜಯಪುರ ನಗರದಲ್ಲಿ ನಾಯಿಗಳ ಹಾವಳಿ - ಬಹಿದೆ೯ಸೆಗೆ ಹೋಗಿದ್ದ 2 ವಷ೯ದ ಮಗುವಿನ ಮೇಲೆ ನಾಯಿ ದಾಳಿ - ಅಸ್ವಸ್ಥ ಬಾಲಕಿ ಆಸ್ಪತ್ರೆಗೆ ದಾಖಲು
17. ಹಾವು ಇದೆ ಹಾವು.. !
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಹಾವುಗಳ ಹಾವಳಿ - ಬಿಬಿಎಂಪಿಗೆ ದೂರು ಸಲ್ಲಿಸಿದ ಹೆಬ್ಬಾಳದ ನಿವಾಸಿಗಳು - ಸ್ಥಳಕ್ಕೆ ಬಂದು ಪರಿಶೀಲಿಸಿದ ಹೆಬ್ಬಾಳ ಮಾಜಿ ಕಾರ್ಪೊರೇಟರ್
18. ಈಗ ಇವೆಲ್ಲಾ ಬೇಕಾ?
ಬೆಂಗಳೂರು: ರಾಜ್ಯ ಸರ್ಕಾರದ ಅವಧಿ ಇನ್ನು 6 ತಿಂಗಳಷ್ಟೇ ಬಾಕಿ - ಚುನಾವಣೆಗೆ 6 ತಿಂಗಳಿರುವಾಗಲೇ ನವೀಕರಣವಾಗ್ತಿದೆ ಗೀತಾ ಮಹದೇವಪ್ರಸಾದ್ ಆಫೀಸ್ - ವಿಧಾನಸೌಧದಲ್ಲಿ ಇನ್ನೂ ನಿಂತಿಲ್ಲ ಸಚಿವರ ಕೊಠಡಿ ನವೀಕರಣ ಕಾರ್ಯ?
19. ಕಾಂಗ್ರೆಸ್ನವರ ತಪ್ಪಿಲ್ಲ: ರೈ
ಮೈಸೂರು: ಜಿಲ್ಲೆಯಲ್ಲಿ ನಡೆಯುವ ಹತ್ಯಾ ಪ್ರಕರಣದಲ್ಲಿ ಕಾಂಗ್ರೆಸ್ವರು ಭಾಗಿಯಾಗಿಲ್ಲ - ಎಸ್ಡಿಪಿಐ, ಬಿಜೆಪಿಯವರು ಗಲಾಟೆ ಎಬ್ಬಿಸುತ್ತಿದ್ದಾರೆ - ಬೇಕಿದ್ದರೆ ದೆಹಲಿಗೆ ಹೋಗಿ ಎಸ್ಡಿಪಿಐ ನಿಷೇಧಿಸಿಕೊಳ್ಳಲಿ - ನಮ್ಮ ಅಭ್ಯಂತರವಿಲ್ಲ ಎಂದ ರಮಾನಾಥ ರೈ
20. ರೈತರಿಗೆ ಸಿಗುತ್ತಾ ಪರಿಹಾರ?
ರಾಯಚೂರು: ರಾಯಚೂರಿನಲ್ಲಿ ನಿರಂತರ ಮಳೆಗೆ ನೆಲಕಚ್ಚಿದ ಬೆಳೆ - ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರು ಕಂಗಾಲು - ಸಮೀಕ್ಷೆ ನಡೆಸಿ ಬೆಳೆ ಪರಿಹಾರ ನೀಡುವಂತೆ ರೈತರ ಒತ್ತಾಯ
21. ಅನಾಥ ಕುಟುಂಬಕ್ಕೆ ನೆರವಿನ ಹಸ್ತ:
ಕಾರವಾರ: ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ನೆರವಿನ ಹಸ್ತ - ಕಾರವಾರ ಜನಶಕ್ತಿ ವೇದಿಕೆಯಿಂದ ಸಹಾಯ - ಜೀವನ ಸಾಗಿಸಲು ಪರದಾಡುತ್ತಿದ್ದ ತಾಯಿ- ಮಗಳಿಗೆ ನೆರವು
22. ಒತ್ತುವರಿ ತೆರವಿಗೆ ಸೂಚನೆ:
ಕೋಲಾರ: ಕೋಲಾರದಲ್ಲಿ ಸರ್ಕಾರಿ ಭೂಮಿ ಒತ್ತುವರಿ - ಅಕ್ರಮವಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ - ಶೀಘ್ರದಲ್ಲೇ ಒತ್ತುವರಿ ತೆರವಿಗೆ ಡಿಸಿ ವಾರ್ನಿಂಗ್
23. ಹಾಡಹಗಲೇ ಮನೆಗೆ ಕನ್ನ:
ಕಲಬುರಗಿ: ಕಲಬುರಗಿಯ ಎಪಿಎಂಸಿ ಮಾಜಿ ಅಧ್ಯಕ್ಷರ ಮನೆಗೆ ಹಾಡಹಗಲೇ ಕನ್ನ - ಮೂರೂವರೆ ಲಕ್ಷ ನಗದು, ಚಿನ್ನಾಭರಣ ದೋಚಿದ ಖದೀಮರು - ಕಳ್ಳತರ ಕೈಚಳಕ ಸಿಸಿ ಕ್ಯಾಮಾರದಲ್ಲಿ ಸೆರೆ - ಕಳ್ಳರ ಪತ್ತೆಗೆ ಜಾಲ ಬೀಸಿದ ಸ್ಟೇಷನ್ ಬಜಾರ್ ಪೊಲೀಸರು
24. ಅವಿಶ್ವಾಸ ಮಂಡನೆ:
ರಾಯಚೂರು: ರಾಯಚೂರು ನಗರ ಸಭೆ ಅಧ್ಯಕ್ಷರಿಗೆ ಆಡಳಿತದ ಬಗ್ಗೆ ಅಸಮಾಧಾನ - 19 ಜನ ಸದಸ್ಯರಿಂದ ಅವಿಶ್ವಾಸ ಮಂಡನೆ - 10 ದಿನದ ಒಳಗೆ ಸಭೆ ಕರೆಯಲು ಮನವಿ
26. ತೈಲ ದರದಲ್ಲಿ ಏರಿಕೆ:
ನವದೆಹಲಿ: ತೈಲ ದರ ನಿತ್ಯ ಪರಿಷ್ಕರಣೆ ಕ್ರಮ ಅಳವಡಿಕೆ ನಂತರ ದರದಲ್ಲಿ ಏರಿಕೆ - ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶೇ 8ರಷ್ಟು ಏರಿಕೆ - ಭಾರತೀಯ ಹೂಡಿಕೆ ಮಾಹಿತಿ ಸಂಸ್ಥೆಯಿಂದ ಸ್ಪಷ್ಟನೆ
27. ‘2000 ರೂ. ನೋಟ್ ರದ್ದಿಗೆ ಸಕಾಲ’
ಆಂಧ್ರಪ್ರದೇಶ: ಹೆಚ್ಚು ಮೌಲ್ಯದ ನೋಟುಗಳಿಂದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಲಿದೆ - 2000 ರೂ. ನೋಟ್ ರದ್ದು ಪಡಿಸುವುದೇ ಒಳ್ಳೆಯದು - ಮೋದಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಸಲಹೆ
28. ಮಿಲ್ಖಾ ಸಿಂಗ್ ಮೇಣದ ಪ್ರತಿಮೆ:
ಚಂಡೀಘಡ: ಅನಾವರಣವಾಯ್ತು ಮಿಲ್ಖಾ ಸಿಂಗ್ ಮೇಣದ ಪ್ರತಿಮೆ - ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಪ್ರತಿಭೆ - ಮೇಡಂ ಟುಸ್ಸಾಡ್ಸ್ನಲ್ಲಿ ಸಿಂಗ್ ಪ್ರತಿಮೆ ಅನಾವರಣ
29 ಹನಿಪ್ರೀತ್ ಜಾಮೀನು ಅರ್ಜಿ ವಜಾ:
ನವದೆಹಲಿ: ಬಾಬಾ ರಾಮ್ ರಹೀಂ ದತ್ತು ಪುತ್ರಿ ಹನಿಪ್ರೀತ್ ಜಾಮೀನು ಅರ್ಜಿ ತಿರಸ್ಕಾರ - ದೆಹಲಿ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾ - ಬಂಧನದ ಭೀತಿಯಲ್ಲಿ ಬಾಬಾ ದತ್ತು ಪುತ್ರಿ
30. ದೆಹಲಿಯಿಂದ ಹನಿಪ್ರಿತ್ ಎಸ್ಕೇಪ್?
ನವದೆಹಲಿ: ಹನಿಪ್ರೀತ್ ಬಂಧನಕ್ಕಾಗಿ ಪೊಲೀಸರ ಕಸರತ್ತು - ದೆಹಲಿಯಲ್ಲಿರುವ ಹನಿಪ್ರಿತ್ ನಿವಾಸ ಜಾಲಾಡಿದ ಪೊಲೀಸರು - ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಬಾಬಾ ದತ್ತು ಪುತ್ರಿ
31. ಮಾಲೆಗಾಂವ್ ಸ್ಫೋಟ ಆರೋಪಿಗೆ ಜಾಮೀನು:
ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣ - ಆರೋಪಿ ಮೇಜರ್ ರಮೇಶ್ ಉಪಾಧ್ಯಾಯಗೆ ಬಾಂಬೆ ಹೈಕೋರ್ಟ್ ಜಾಮೀನು - 1 ಲಕ್ಷ ಬಾಂಡ್ ಪಡೆದು ಜಾಮೀನು ನೀಡಿದ ಕೋರ್ಟ್
32. ಅಥ್ಲಿಟ್ ವೀಸಾ ನಿರಾಕರಣೆ:
ನವದೆಹಲಿ: 101 ವರ್ಷದ ಭಾರತೀಯ ಅಥ್ಲೀಟ್ಗೆ ವೀಸಾ ನೀಡಲು ಚೀನಾ ನಕಾರ - ಏಷ್ಯಾನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಹೊರಟಿದ್ದ ಮಾನ್ ಕೌರ್ - ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ವೀಸಾ ತಿರಸ್ಕೃರಿಸಿದ ಚೀನಾ
33. ವರುಣ್ಗಾಂಧಿ ಲೇಖನಕ್ಕೆ ಕಿಡಿ:
ನವದೆಹಲಿ: ರೋಹಿಂಗ್ಯಾಗಳ ಪರ ವರುಣ್ ಗಾಂಧಿ ಬ್ಯಾಟಿಂಗ್ - ನಿರಾಶ್ರಿತರಿಗೆ ಆಶ್ರಯ ನೀಡಬೇಕು ಎಂದು ಲೇಖನ - ವರುಣ್ ಗಾಂಧಿ ಲೇಖನಕ್ಕೆ ಟೀಕೆಗಳ ಸುರಿಮಳೆ
34. 98ನೇ ವಯಸ್ಸಿನಲ್ಲಿ MA ಪಾಸ್
ಪಾಟ್ನಾ: 98ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಹಿರಿಯ ನಾಗರಿಕ - ಯಾವುದೇ ಸೌಕರ್ಯ ಇಲ್ಲದೆ ಎಂಎ ಪರೀಕ್ಷೆ ಪಾಸ್ - ಯುವಕರಿಗೂ ಮಾದರಿಯಾದ ಪಾಟ್ನಾದ ರಾಜ್ ಕುಮಾರ್
35. ಐತಿಹಾಸಿಕ ಭದ್ರಕಾಳಿ ಪ್ರತಿಮೆ ಪತ್ತೆ
ತಮಿಳುನಾಡು: ತಮಿಳುನಾಡಿನ ಸಾವಿರ ವರ್ಷ ಹಳೆಯ ಭದ್ರಕಾಳಿ ಪ್ರತಿಮೆ ಪತ್ತೆ - ನದಿ ತಟದಲ್ಲಿ ಸಿಕ್ತು ಐತಿಹಾಸಿಕ ಕಲ್ಲಿನ ಶಿಲ್ಪ - ದಿಂಡಿಗಲ್ನ ಇರವಿಮಂಗಲಂ ನದಿಯಲ್ಲಿ ಪತ್ತೆ
36. ಗುಪ್ತಚರ ಸಂಸ್ಥೆಯಿಂದಲೇ ಉಗ್ರರ ರಕ್ಷಣೆ
ಇಸ್ಲಾಮಾಬಾದ್ : ನಮ್ಮ ದೇಶದ ಗುಪ್ತಚರ ಸಂಸ್ಥೆಯೇ ಭಯೋತ್ಪಾದಕರನ್ನು ರಕ್ಷಿಸುತ್ತಿದೆ - ಮಾಹಿತಿ ಇದ್ರೂ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ - ಪಾಕಿಸ್ತಾನದ ಗುಪ್ತಚರ ದಳದ ಅಧಿಕಾರಿಯಿಂದ ಸ್ಫೋಟಕ ಸತ್ಯ ಬಯಲು
37. ಪಾಕ್ ಭಯೋತ್ಪಾದನೆ ಒಪ್ಪಿದ ಚೀನಾ:
ಬೀಜಿಂಗ್: ಮಿತ್ರದೇಶ ಪಾಕಿಸ್ತಾನ ಭಯೋತ್ಪಾದನೆ ಒಪ್ಪಿಕೊಂಡ ಚೀನಾ - ಆದರೂ ಪಾಕ್ ಪರ ವಹಿಸಿದ ಚೀನಾ -ಸುಷ್ಮಾರದ್ದು ಸೊಕ್ಕಿನ ಮಾತು ಎಂದು ಕಿಡಿ
38. ಹಿಲ್ ಸ್ಟೇಷನ್ನಲ್ಲಿ ಸ್ಫೋಟ:
ಲಂಡನ್: ಲಂಡನ್ ಟವರ್ ಹಿಲ್ ಸ್ಟೇಷನ್ನಲ್ಲಿ ಸ್ಫೋಟ - ಐವರು ಪ್ರಯಾಣಿಕರಿಗೆ ಗಾಯ - ಘಟನೆಯಿಂದ ಗಾಬರಿಯಾದ ಪ್ರಯಾಣಿಕರು
39. ಫೋಟೋ ತಂದ ಆಪತ್ತು!
ನ್ಯೂಯಾರ್ಕ್: ಪಾಸ್ಪೋರ್ಟ್ನಲ್ಲಿ ಯುವತಿಯಂತೆ ಕಾಣಿಸಿದ್ದೇ ತಪ್ಪಾಯ್ತು - ಟರ್ಕಿಯಿಂದ ವಾಪಸ್ಸಾಗುತ್ತಿದ್ದ 41 ವರ್ಷದ ಮಹಿಳೆ ವಶಕ್ಕೆ - ನ್ಯೂಯಾರ್ಕ್ ನ ಪಾಸ್ಪೋರ್ಟ್ ಕಚೇರಿಯಲ್ಲಿ ವಿಲಕ್ಷಣ ಘಟನೆ
40. ನೋಬೆಲ್ ಗೆ ಡಾಲರ್ ನಗದು
ಸ್ವೀಡನ್: ಮುಂದಿನವಾರ2017ರ ಸಾಲಿನ ನೋಬೆಲ್ ಪ್ರಶಸ್ತಿ ಪ್ರದಾನ - ಇನ್ಮುಂದೆನೋಬೆಲ್ ವಿಜೇತರಿಗೆ ಮಿಲಿಯನ್ ಡಾಲರ್ ನಗದು - ನೋಬೆಲ್ ಫೌಂಡೇಶನ್ ನ ಆಡಳಿತ ಮಂಡಳಿಯಿಂದ ಸಿಹಿಸುದ್ದಿ
41. ದುಬೈ: ಕ್ರಿಕೆಟ್ ರೂಲ್ಸ್ ಚೇಂಜ್
ಅಸಭ್ಯ ವರ್ತನೆ ತೋರುವ ಆಟಗಾರರಿಗೆ ನೀಡುವ ಶಿಕ್ಷೆಯಲ್ಲಿ ಭಾರಿ ಬದಲಾವಣೆ - ನಾಳೆಯಿಂದ ಪ್ರಾರಂಭವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಲ್ಲಿ ಈ ಹೊಸ ನಿಯಮಗಳು ಜಾರಿ - ಆಫ್ರಿಕಾ-ಬಾಂಗ್ಲಾ ಮತ್ತು ಪಾಕ್-ಲಂಕಾ ಸರಣಿಗಳ ಮೂಲಕ ಅನುಷ್ಠಾನಗೊಳ್ಳಲಿದೆ ಹೊಸ ನಿಯಮ
42. ಬೆಂಗಳೂರು: ಕಠಿಣ ಅಭ್ಯಾಸ
ನಾಳೆ ಬೆಂಗಳೂರಿನಲ್ಲಿ ಭಾರತ-ಆಸ್ಟ್ರೇಲಿಯಾ 4ನೇ ಏಕದಿನ ಪಂದ್ಯ - ಈ ಪಂದ್ಯಕ್ಕಾಗಿ ಸಿದ್ಧಗೊಂಡಿದೆ ಚಿನ್ನಸ್ವಾಮಿ ಸ್ಟೇಡಿಯಂ- ಪಂದ್ಯಕ್ಕೆ ಎರಡು ದಿನ ಮುನ್ನವೇ ಟಿಕೆಟ್ ಕೊಂಡ ಪ್ರೇಕ್ಷಕರು
43. ಬೆಂಗಳೂರು: ಪಾಂಡೆ ಮನದಾಳ
ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳೊ ಒತ್ತಡದಲ್ಲಿ ನಾನಿದ್ದೇನೆ - ನನಗೆ ಪತ್ರಿ ಪಂದ್ಯವು ಆರ್ ಡೈ - ಉತ್ತಮ ಪ್ರದರ್ಶನ ನೀಡೋ ಒತ್ತಡದಲ್ಲಿದ್ದೇನೆ ಎಂದ ಮನೀಷ್ ಪಾಂಡೆ
44. ಲಕ್ನೌ: ಪೃಥ್ವಿ ಶಾ ದಾಖಲೆ
ಆರಂಭಿಕ ಆಟಗಾರ ಪೃಥ್ವಿ ಶಾ ದುಲೀಪ್ ಟ್ರೋಫಿಯಲ್ಲಿ ಹೊಸ ಇತಿಹಾಸ ನಿಮಾರ್ಣ - 320 ದಿನಗಳ ದುಲೀಪ್ ಟ್ರೋಫಿಯಲ್ಲಿ ಶತಕ - ರಾಹುಲ್ ದ್ರಾವಿಡ್ ಮಾರ್ಗದರ್ಶವೇ ನನಗೆ ಸ್ಫೂರ್ತಿ ಎಂದ ಪೃಥ್ವಿ
45. ಲಂಡನ್: ಬೆನ್ ಸ್ಟೋಕ್ಸ್ ಬಂಧನ
ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅರೆಸ್ಟ್ - ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನ - ಇಂದು ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಸ್ಟೋಕ್ಸ್ ಡ್ರಾಪ್
